ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನುರಾಧಾ ಪೌಡ್ವಾಲ್


 ಅನುರಾಧಾ ಪೌಡ್ವಾಲ್ 


ಕನ್ನಡದ ಮಣ್ಣಿನವರಾದ ಅನುರಾಧಾ ಪೌಡ್ವಾಲ್ ಸುಶ್ರಾವ್ಯ ಧ್ವನಿಯ ಹಿನ್ನೆಲೆ ಗಾಯಕಿ.  ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ಅವರ ಸಂಗೀತ ಹರಿದಿದೆ. ಭಕ್ತಿ ಸಂಗೀತದಲ್ಲಂತೂ ಅವರು ಬಹು ದೊಡ್ಡ ಹೆಸರು.  ವಿಶ್ವಸಂಸ್ಥೆಯಲ್ಲಿ ಭಾರತೀಯ ಭಕ್ತಿಸಂಗೀತದ ರಾಯಭಾರಿ ಗೌರವ ಅವರಿಗೆ ಸಂದಿತ್ತು.  

ಅನುರಾಧಾ ಅವರ ಹುಟ್ಟು ಹೆಸರು ಅಲ್ಕಾ ನಾಡಕರ್ಣಿ. ಅವರು 1954ರ ಅಕ್ಟೋಬರ್ 27ರಂದು ಕರ್ನಾಟಕದ ಕಾರವಾರದಲ್ಲಿ ಜನಿಸಿದರು.

ಅನುರಾಧಾ ಪೌಡ್ವಾಲ್ 1973ರಲ್ಲಿ 'ಅಭಿಮಾನ್' ಚಿತ್ರದಲ್ಲಿ ಮೊದಲು ಹಾಡಿದರು. ಅದೇ ಸಮಯದಲ್ಲಿ ಮರಾಠಿಯಲ್ಲಿ 'ಯಶೋದಾ' ಚಿತ್ರದಲ್ಲಿ ಹಾಡಿದ ಹಾಡು ಮೊದಲು ಬಿಡುಗಡೆ ಕಂಡಿತು.  ಹೀರೊ ಚಿತ್ರದ 'ತೂ ಮೇರಿ ಜಾನೂ ಹೈ' ಜನಪ್ರಿಯವಾಯ್ತು. 1990ರ ದಶಕದಲ್ಲಿ ಆಶಿಖಿ, ದಿಲ್ ಹೈ ಕೆ ಮಾನ್ತಾ ನಹಿ, ಸಡಕ್, ಬೇಟಾ, ಸಾಜನ್ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಅವರ ಗಾಯನ ಅದ್ಭುತ ಯಶ ಕಂಡವು. ಕನ್ನಡದಲ್ಲಿ ಅವರು ಹಾಡಿರುವ ಜೀವನದಿ ಚಿತ್ರದ 'ಕನ್ನಡ ನಾಡಿನ ಜೀವನದಿ', ಪ್ರೀತ್ಸೆ ಚಿತ್ರದ 'ಸೈ ಸೈ', 'ಯಾರಿಟ್ಟರೀ ಚುಕ್ಕಿ' , 'ಹೋಳಿ ಹೋಳಿ’ ಮುಂತಾದ ಗೀತೆಗಳು ಜನಪ್ರಿಯವಾಗಿವೆ.

ಅನುರಾಧಾ ಪೌಡ್ವಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ,  ಮಹಾರಾಷ್ಟ್ರ ಸರ್ಕಾರದ ಮೊಹಮ್ಮದ್ ರಫಿ ಪ್ರಶಸ್ತಿ, ಮಧ್ಯಪ್ರದೇಶ್ ಸರ್ಕಾರದ ಲತಾ ಮಂಗೇಶ್ಕರ್ ಪ್ರಶಸ್ತಿ, ಮದರ್ ತೆರೇಸಾ ಪ್ರಶಸ್ತಿ, ಡಾ. ಡಿ. ವೈ. ಪಾಟೀಲ್ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ,   ಕಲಾಟ್ ನಕಲಾತ್ ಚಲನಚಿತ್ರದ ಹಿ ಏಕ್ ರೇಷಮಿ ಗಾಯನಕ್ಕೆ ರಾಷ್ಟ್ರೀಯ ಚಲನಚಿತ್ರ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ನಾಲ್ಕು ಬಾರಿ ಫಿಲಂ ಫೇರ್ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ಅನುರಾಧಾ ಪೌಡ್ವಾಲ್ ಅವರು ಭಕ್ತಿ ಗೀತೆಗಳಿಗೂ ಅಪಾರ ಜನಪ್ರಿಯರು. ಇವರು ತಾವು ಗಳಿಸಿದ್ದನ್ನು ಭಾರತೀಯ ಸೇನೆಯಲ್ಲಿ ಮೃತಪಟ್ಟ ಸೈನಿಕರ ಕುಟುಂಬದ ಸಹಾಯಕ್ಕೆ, ಬಡಜನರಿಗೆ ವಿದ್ಯುತ್ ಪೂರೈಕೆಗೆ, ಮಕ್ಕಳ ಅಪೌಷ್ಠಿಕತೆಯ ನಿರ್ಮೂಲನೆಗೆ ಮುಂತಾದ ಅನೇಕ ಧ್ಯೇಯೋದ್ದೇಶಗಳಿಗೆ ವಿನಿಯೋಗಿಸುವ ಹೃದಯವಂತೆಯಾಗಿಯೂ ಹೆಸರಾಗಿದ್ದಾರೆ.

On the birthday of great playback and devotional singer Anuradha Paudwal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ