ರಮೇಶ್ ಪಂಡಿತ್
ರಮೇಶ್ ಪಂಡಿತ್
ರಮೇಶ್ ಪಂಡಿತ್ ರಂಗಭೂಮಿ, ಕಿರುತೆರೆ ಮತ್ತು ದಕ್ಷಿಣ ಭಾರತ ಚಲನಚಿತ್ರರಂಗದ ಕಲಾವಿದರಾಗಿ ಹೆಸರಾಗಿದ್ದಾರೆ.
ಅಕ್ಟೋಬರ್ 27, ರಮೇಶ್ ಪಂಡಿತ್ ಅವರ ಜನ್ಮದಿನ.
ಸಮುದಾಯ ತಂಡದಿಂದ ರಂಗಪಯಣ ಆರಂಭಿಸಿದ ರಮೇಶ್ ಪಂಡಿತ್, ಸ್ಪಂದನ ತಂಡದ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸತೊಡಗಿದರು. ಅಂದಿನ ದಿನಗಳಲ್ಲೇ ಭಾರತ್ ಯಾತ್ರಾ ಕೇಂದ್ರದವರು ನಡೆಸಿದ ಕಾಲೇಜು ರಂಗ ಸ್ಪರ್ಧೆಗಳಲ್ಲಿ 'ಸಿದ್ಧತೆ' ನಾಟಕದ ಪ್ರಮುಖ ಪಾತ್ರದ ಅಭಿನಯಕ್ಕೆ ಸತ್ಯಸಂಧ ಹೆಸರಿನಲ್ಲಿ ಪ್ರಥಮ ಬಹುಮಾನ ಪಡೆದಿದ್ದವರು.
'ಕರಿಮಾಯಿ'ಯ ಗುಡಸೀಕರ, ಲಕ್ಷಾಪತಿ ರಾಜನ ಕಥೆಯ 'ಅಣ್ಣ,ಜೋಗಿ' ಪಾತ್ರಗಳಲ್ಲದೆ, ಅಗ್ನಿಪಥ, ಘಾಸಿರಾಂ ಕೊತ್ವಾಲ್ ಮುಂತಾದ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಜರ್ಮನ್ ನಿರ್ದೇಶಕ ವುಲ್ಫ್ ಗಾಂಗ್ ಕೊಲೆಂಡರ್ ನಿರ್ದೇಶನದಲ್ಲಿ ಗುಮ್ಮ ಬಂದ ಗುಮ್ಮ ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಂಗಸಜ್ಜಿಕೆ, ನಟನೆ ಸೇರಿದಂತೆ ಅವರಿಗೆ ರಂಗಭೂಮಿಯ ಎಲ್ಲ ಶಾಖೆಗಳಲ್ಲೂ ಪರಿಣತಿಯಿದೆ.
ಮುಂದೆ ರಮೇಶ್ ಪಂಡಿತ್ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಅರಗಿಣಿ, ನಾನಿ, ಜಿಗರ್ ಥಂಡ. ಶಿವಾಜಿ ಸೂರತ್ಕಲ್, ಇಂಗಳೆ ಮಾರ್ಗ, ಶಿವಗಾಮಿ, ಬದ್ಮಾಶ್, ರಾಮ ಧಾನ್ಯ, ಬಿಚ್ಚುಗತ್ತಿ ಸೇರಿದಂತೆ ಅವರು ವಿವಿಧ ಭಾಷೆಗಳಲ್ಲಿ ನಟಿಸಿರುವ ಚಿತ್ರಗಳು ನೂರಾರು. ಇತ್ತೀಚಿನ 'ಪುಟ್ಟಕ್ಕನ ಮಕ್ಕಳು' ಸೇರಿದಂತೆ ಅವರು ನಿರ್ವಹಿಸಿರುವ ಜನಪ್ರಿಯ ಧಾರಾವಾಹಿಗಳಲ್ಲಿನ ಪಾತ್ರಗಳು ಅನೇಕ.
ರಮೇಶ್ ಪಂಡಿತ್ ಅವರ ಪತ್ನಿ ಸುನೇತ್ರಾ ಪಂಡಿತ್ ಅವರು ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳ ಜನಪ್ರಿಯ ಕಲಾವಿದೆ
ಮಗಳು ಶ್ರೀಯಾ ಪಂಡಿತ್.
ರಮೇಶ್ ಪಂಡಿತ್ ಅವರಿಗೆ ನಾಟಕ ಅಕಾಡೆಮಿ ಪ್ತಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಪ್ರತಿಭಾನ್ವಿತ ಕಲಾವಿದರಾದ ರಮೇಶ್ ಪಂಡಿತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕೃತಜ್ಞತೆಗಳು: Vidya Malavalli M S
On the birthday of our talented artists Ramesh Pandit
ಕಾಮೆಂಟ್ಗಳು