ಗಣಪತಿ ಭಟ್ ಹಾಣಸಗಿ
ಪಂ. ಗಣಪತಿ ಭಟ್ ಹಾಸಣಗಿ
ಮಹಾನ್ ಹಿಂದೂಸ್ತಾನಿ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ ಅವರು ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನಸೇನ ಪ್ರಶಸ್ತಿಗೆ ಪಾತ್ರರಾದವರು.
ಪಂ. ಗಣಪತಿ ಭಟ್ ಹಾಸಣಗಿ ಅವರು ಕರ್ನಾಟಕದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪರಂಪರೆಯ ಗಮನಾರ್ಹ ಕೊಂಡಿ ಎನಿಸಿದ್ದಾರೆ. ಇವರು ಜನಿಸಿದ್ದು 1951 ವರ್ಷದಲ್ಲಿ. ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಸಮೀಪದ ಹಾಸಣಗಿ ಗ್ರಾಮದವರು. ಧಾರವಾಡದ ಕರ್ನಾಟಕ ಕಾಲೇಜಿಗೆ ಸಂಗೀತದ ಒಂದು ಅಲ್ಪಾವಧಿ ತರಬೇತಿಗಾಗಿ ಬಂದಿಳಿದರು. ಭಟ್ ಸಿತಾರ್ ವಾದನದ ಸಂಗೀತ ತರಬೇತಿ ಆರಂಭಿಸಿ, ಹಿಂದೂಸ್ತಾನಿ ಗಾಯನ ಸಂಗೀತದೆಡೆಗೆ ಬಂದರು. ಇವರು ಕಿರಾಣಾ ಘರಾನಾದಲ್ಲಿ ಪಂ.ಬಸವರಾಜ ರಾಜಗುರು ಅವರ ಶಿಷ್ಯರು. ಪಂಡಿತ್ ಸಿ. ಆರ್. ವ್ಯಾಸ್ ಅವರಿಂದ ಗ್ವಾಲಿಯರ್ ಘರಾನಾದಲ್ಲಿ ತರಬೇತಿ ಪಡೆದ ಇವರು ಪಟಿಯಾಲ ಘರಾನಾದಲ್ಲಿಯೂ ಪಂಡಿತರು. ಆಂಗ್ಲ ಸಾಹಿತ್ಯದಲ್ಲಿ ಪದವೀಧರರೂ ಆದರು.
ಹುಟ್ಟೂರಿನಲ್ಲೇ ನೆಲೆನಿಂತು ಹಿಂದೂಸ್ತಾನಿ ಸಂಗೀತದಲ್ಲಿ ಶಿಷ್ಯರನ್ನು ತರಬೇತುಗೊಳಿಸುತ್ತಿರುವ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ದೇಶ-ವಿದೇಶಗಳ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ
ಸಂಗೀತಸುಧೆ ಹರಿಸಿದ್ದಾರೆ.
ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (2007), ವತ್ಸಲಭಾಯಿ ಭೀಮ್ಸೇನ್ ಜೋಶಿ ಪ್ರಶಸ್ತಿ (2006), ಶ್ರೀ ನಿಜಗುಣ-ಪುರಂದರ ಪ್ರಶಸ್ತಿ, ತಾನಸೇನ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
Pandit Ganapathi Bhat Hanasagi
ಕಾಮೆಂಟ್ಗಳು