ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ25


 ತಿರುಪ್ಪಾವೈ 25

ದೇವಕೀ ಕಂದನಾಗಿ ಜನಿಸಿ ನಂದಯಶೋದೆಯರ ಕಣ್ಮಣಿಯಾಗಿ ಬೆಳೆದೆ 
Thiruppavai 25

ಒರುತ್ತಿ ಮಹನಾಯ್ ಪ್ಪಿರಂದೋರಿರವಿಲ್ 
ಒರುತ್ತಿ ಮಹನಾ ಒಳಿತ್ತು ವಳರ ತರಿಕ್ಕಿಲಾನಾಹಿತ್ತಾನ್ ತೀಂಗು ನಿನೈಂದ ಕರುತ್ತೈ ಪಿಳ್ಳೆಪ್ಪಿತ್ತು ಕಂಜನ್ ವಯಿತ್ತಿಲ್ ನೆರುಪ್ಪೆನ್ನ ನಿನ್ರ ನೆಡುಮಾಲೆ ಮುನ್ನೈ ಆರುತ್ತಿತ್ತು ವಂದೋಂ ಪರೈ ತರುದಿಯಾಗಿಲ್ 
ತಿರುತ್ತಕ್ಕ ಶೆಲ್ವಮುಂ ಶೇವಕಮುಂ ಯಾಮ್ ಪಾಡಿ 
ವರುತ್ತಮಂ ತೀರ್‌ನ್ದು
ಮಹಿಳ್‍ನ್ದೇಲೋರೆಂಬಾವಾಯ್

ಭಾವಾನುವಾದ 25

ಅಣ್ಣ ದುರ್ಗೆಗೆ ನೀನತಿಶಯದಿ ಇರಲು ಬಲಭದ್ರ ನಿನಗಣ್ಣನಾಗಿ
ಬೆಳೆದೆ ನೀ ಗೋಕುಲದಿ ನಂದನಂದನನಾಗಿ ದೇವಕೀತನಯ
ಹಚ್ಚಿ ಕಿಚ್ಚನು ಕಂಸನೆದೆಯಲ್ಲಿ ಕೊಂದೆ ನೀನಸುರರನು ಅನಿರುದ್ದನೇ ಪಾಡಲಳವೇ ನಿನ್ನನಂತ ಗುಣಗಾನ ಸಿರಿಗೋದೆಯರಸನೇ ಗೋಪಾಲ
ಸನಕ ಸನಂದಾದಿ ಮುನಿವಂದಿತಾ ಚರಣ ತಿರು ಶೆಲ್ವ ನಾರಾಯಣನೆ 
ಪಾಲ್ಗೆಣ್ಣೆ ಕದ್ದ ಮುದ್ದು ಶಿಶು ನೀ ಮಾತೆ ಯಶೋದೆಗೆ ಗೋಕುಲದಿ 
ಅಮರ ವಂದಿತಾ ಚರಣ ನೀ ಕಂದ ಮಾತೆ ದೇವಕಿಗೆ 
ನಿನ್ನ ಸಿರಿಪಾದ ತೊರೆಮಗೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು

ಸಂಕ್ಷಿಪ್ತ ಭಾವಾರ್ಥ 25

ಹೇ ಅನಂತಶಯನ, ನಿನ್ನನ್ನು ಅರ್ಥಮಾಡಿಕೊಳ್ಳಲು ಯಾರಿಗೆ ತಾನೇ ಸಾಧ್ಯ? ಭಯಂಕರವಾಗಿ ಮಳೆಯು ಸುರಿಯುತ್ತಿದ್ದ ನಟ್ಟನಡುರಾತ್ರಿ ದೇವಕೀ ಕಂದನಾಗಿ ಲೋಕ ಕಲ್ಯಾಣಕ್ಕಾಗಿ ಸೆರೆಮನೆಯಲ್ಲಿ ಜನಿಸಿದೆ. ಗೋಕುಲದಲ್ಲಿ ನಂದಯಶೋದೆಯರ ಕಣ್ಮಣಿಯಾಗಿ ಬೆಳೆದೆ.

ದುರ್ಗೆಯು ನಿನಗೆ ತಂಗಿಯಾಗಿ, ಅನಂತನೇ ನಿನಗೆ ಅಣ್ಣನಾಗಿ ಜನ್ಮವೆತ್ತಿ ಬಂದು ನಿನಗೆ ಧರ್ಮ ಸಂಸ್ಥಾಪನೆಯ ಕೆಲಸದಲ್ಲಿ ನೆರವಾಗಿದ್ದಾರೆ. ನೀನು ಕಂಸನ ಎಲ್ಲ ರಾಕ್ಷಸ ಸೇವಕರನ್ನೂ ಸಂಹರಿಸಿ ಪವಾಡಗಳ ಶಿಶುವಾಗಿ ಕಂಸನ ಎದೆಯಲ್ಲಿ ನಡುಕವನ್ನುಂಟುಮಾಡಿ, ನಿನ್ನ ಬಾಲ ಲೀಲಾ ವಿನೋದಗಳಿಂದ ಜಗತ್ತನ್ನೇ ಅಚ್ಚರಿಗೊಳಿಸಿದೆ. ನೀನು ವರ್ಣನಾತೀತ.

ನೋಡು ಸುರಲೋಕದಿಂದ ಸುರರೆಲ್ಲ ನಾರದರೊಡಗೂಡಿ ನಿನ್ನ ಧ್ಯಾನದಲ್ಲಿ ಲೀನರಾಗಿ ನಿಂತಿದ್ದಾರೆ. ಹೇ ಅಚ್ಯುತ, ಅನಂತ, ಅನಂತಾನಂತ, ನೀನು ಕಂದ ಮಾತೆ ದೇವಕಿಗೆ, ಪಾಲೈಣ್ಣೆ ಕದ್ದ ಕಳ್ಳ ಕೃಷ್ಣ ನೀ ಮಾತೆ ಯಶೋದೆಗೆ, ಎಂತಹ ಲೀಲಾ ವಿನೋದಿ ನೀನು!

ಸಕಲ ಚರಾಚರಕ್ಕೂ ನೀನೇ ಸೂತ್ರಧಾರನಾಗಿದ್ದೀಯ. ನಿನ್ನನ್ನೇ ನಂಬಿ ನಾವುಗಳು ವ್ರತವನ್ನಾಚರಿಸಿ ಬಂದಿದ್ದೇವೆ. ನೀನು ನಮಗೆ ಪ್ರೇಮದಿಂದ ಇಹಪರ ಸಾಧನೆಯ ವರಗಳನ್ನು ಕೊಟ್ಟು ಸಲಹು. ನಮ್ಮನ್ನು ಜೀವನ್ಮುಕ್ತರನ್ನಾಗಿಸು.
ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳವಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ