ಮಾನ್ವಿ ನರಸಿಂಗ ರಾವ್ ಆಪ್ತ ನೆನಪು
ಮಾನ್ವಿ ನರಸಿಂಗ ರಾವ್ ಆಪ್ತ ನೆನಪು
ಲೇಖಕಿ: ಮೀರಾ ಕುಲಕರ್ಣಿ
(ನಾನು ಸಾಧಕರ ಬಗ್ಗೆ ಬರೆದಾಗಲೆಲ್ಲ, ಆ ಕುಟುಂಬಕ್ಕೆ ಸೇರಿದ ಯಾರಾದರೂ ವಿಶ್ವದ ಯಾವುದೇ ಮೂಲೆಯಿಂದ ಅನಿರೀಕ್ಷಿತವಾಗಿ ಬಂದು ತಮ್ಮ ಸಂತೋಷ ಹಂಚಿಕೊಳ್ಳುವುದಿದೆ. ಇಂದು ಮಾನ್ವಿ ನರಸಿಂಗರಾಯರ ಬಗ್ಗೆ ಬರೆದಾಗ ಆತ್ಮೀಯರಾದ Meera Kulkarni ತಮ್ಮ ಚಿಕ್ಕತಾತನ ಬಗ್ಗೆ ಅಮೂಲ್ಯ ನೆನಪು ಹಂಚಿಕೊಂಡಿದ್ದಾರೆ)
Manvi Narsing Rao ಅವರ ಶತಮಾನೋತ್ಸವದ ಸಮಯದಲ್ಲಿ (2011ರಲ್ಲಿ) ನಾನು ಬರೆದ ಬರಹ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ
ಒಂದು ನೋಟ ---ನೆನೆಪುಗಳತ್ತ
ಬಾಲ್ಲ್ಯದ ದಿನಗಳನ್ನು ನೆನೆಸಿಕೊಂಡಾಗ ಈ ಮೂವರು ತಾತಣ್ಣ ರ ಸವಿ ನೆನೆಪುಗಳನ್ನು ಮರೆಯಲು ಸಾದ್ಯವಿಲ್ಲ.
ಮೊದಲನೆಯವರಾಗಿ ಎಂಕಣ್ಣ (ಮಟಮರಿ ವೆಂಕೋಬರಾವ್) ನನ್ನ ಸ್ವಂತ ತಾತ (ತಾಯಿಯ ತಂದೆ) ಅವರನ್ನು ತಾತ ಎಂದು ಕರೆಯದೆ ಎಂಕಣ್ಣ ಎಂದು ಕರೆದು ಅಭ್ಯಾಸ. ನನಗೆ ಅವರೊಂದಿಗೆ ತುಂಬಾ ಸಲಿಗೆ,ಪ್ರೀತಿ ಸ್ನೇಹ ಆತ್ಮೀಯತೆ. ಆ ಅನುಭವಗಳನ್ನು ಬರೆಯಲು ಕುಳಿತರೆ ಒಂದು ಚಿಕ್ಕ ಪುಸ್ತಕವೇ ಆದೀತು. ಎರಡನೆಯವರಾಗಿ
ಹಮ್ಮಣ್ಣ (ಮಟಮರಿ ಹನುಮಂತರಾವ್) ಚಿಕ್ಕ ತಾತ ಇವರನ್ನು ನೋಡಿದ್ದು ಜ್ಞಾಪಕ ಮಾತ್ರ ಇವರೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿಲ್ಲ ತಾಯಿಂದ ಇವರ ವಿಷಯ ಕೇಳಿದ್ದು ಅಷ್ಟೇ. ಇನ್ನು ಮೂರನೆಯವರಾಗಿ
ಅಣ್ಣಾ (ಮಾನ್ವಿ ನರಸಿಂಗರಾವ್)---ಇವರು ಸಹ ನನ್ನ ಚಿಕ್ಕ ತಾತ. ಅವರನ್ನು ಅಣ್ಣಾ ಹಾಗು ಚಿಕ್ಕಜ್ಜಿ ಯನ್ನು ಅಮ್ಮ ಎಂದು ಕರೆಯುತಿದ್ದೆವು. (ಅವರ ಮಕ್ಕಳಂತೆ ) ಅಣ್ಣಾ ಹಾಗು ಅವರ ಕುಟುಂಬ ನಮ್ಮ ಕುಟುಂಬ (ಸಂಗಂ)ಗಳಲ್ಲಿ ತುಂಬಾ ಅನ್ನ್ಯೋನತೆ ಇತ್ತು ಇಗಲೂಇದೆ.
ಈ ನೆನೆಪುಗಳೆಲ್ಲ ಸುಮಾರು ೫೦ ವರ್ಷಗಳ ಹಿಂದಿನವು. ಆಗ ನಾವೆಲ್ಲ (ನಾನು ಮತ್ತು ನನ್ನ ಸಹೋದರರು )ಚಿಕ್ಕವರು ಮಾಧ್ಯಮಿಕ ಶಾಲೆಯಲ್ಲಿಯಲ್ಲಿ ಓದುತ್ತಿದ್ದೆವು. ವಾರ್ಷಿಕ ಪರೀಕ್ಷೆ ಯಾದ ಮಾರನೆ ದಿನವೇ ರೈಲು ಹತ್ತಿ ಹೈದರಾಬಾದಿಗೆ ಬಂದು ನೇರವಾಗಿ C I B ೪೦(ಅಣ್ಣ ನ ಮನೆ ) ಗೆ ಹೋಗುವುದೇ ಒಂದು ಸಂಭ್ರಮ.
ಬಹುತೇಕ ಬೇಸಿಗೆಯ ರಜೆಗಳೆಲ್ಲ ಇಲ್ಲಿಯೇ ಅಂದರೆ ಅಣ್ಣನ ಮನೆಯಲ್ಲಿ (ಸಾಮಾನ್ಯವಾಗಿ ಕರೆಯುವದು ಗೋಪಿ ಪೌನಿ ಮನೆ ಎಂದು) ಕಳೆದವು ಎಂದರೆ ತಪ್ಪಿಲ್ಲ. ನಾವು ಹೋದೊಡನೆ ಓಡಿಬಂದು ಅಪ್ಪಿ ನಗುಮುಖ ದಿಂದ ಬರಮಾಡಿ ಕೊಳ್ಳುತ್ತಿದ್ದರು ಅಣ್ಣಾ ಅಮ್ಮ ಹಾಗೂ ಅವರ ಮಕ್ಕಳು (ರಾಮು, ಮನ್ನಾ,ರಾಗು, ವಿಜ್ಜು, ಗೋಪಿ, ಪೌನಿ,ಹಾಗೂ ಸುಧಮ್ಮ) ಅಲ್ಲದೆ ಹಾಲ್ ನಲ್ಲಿ ಎದುರಾಗುತ್ತಿದ್ದವು ಅಣ್ಣಾ ಮತ್ತು ಅಮ್ಮ ಅವರ ದೊಡ್ಡದಾದ ಫೋಟೋಗಳೂ ಸಹ. ನಮ್ಮ ತಾಯಿ ಎಂದರೆ ಅಣ್ಣಾ ಅಮ್ಮ ಗೆ ತುಂಬಾ ಪ್ರೀತಿ.ನಮಗೂ ಸಹ ಅವೆರಂದರೆ ತುಂಬಾ ಗೌರವ ಆದರ. ಅವರಿಗೆ ಮಕ್ಕಳೆಂದರೆ ಬಹಳ ಇಷ್ಟ್ಟ ಅದರಿಂದಾಗಿ ನಾವುಗಳು ತುಂಬಾ ಹತ್ತಿರವಾಗಿದ್ದೆವು ನಮ್ಮ ಗದ್ದವನ್ನು ಹಿಡಿದು ಅಲ್ಲಾಡಿಸಿ ಹಲ್ಲುಗಳನ್ನು 'ಕಟಕಟ' (ಶಬ್ದ)ಅನಿಸುವ ಅಣ್ಣನ ರೀತಿಯೇ ಬೇರೆ.ಕೈ ರಟ್ಟೆಯನ್ನು ಹಿಡಿದು ಒಂದು ಮಾದರಿಯ ಪಿಂಚ್(ಕಡಬು)ಕೊಟ್ಟು ನಮ್ಮನ್ನು ನಗಿಸುವ ಅವರ ಆಟ ಇಗಲೂ ನೆನೆಸಿಕೊಳ್ಳುತ್ತೇವೆ.(ಸ್ವಲ್ಪ ನೋವಾದರೂ ನಗುತ್ತಿದ್ದೆವು).
ಅಣ್ಣನ ಶಿಸ್ತಿನ ದಿನಚರಿ ,ದೇವರ ಮೇಲಿನ ಭಕ್ತಿ ಪೂಜೆ ಮುಖ್ಯವಾಗಿ ಎಲ್ಲರೊಂದಿಗೆ ನಗುತ್ತ ಮಾತಾಡುವ ಅಣ್ಣನ ಸ್ವಭಾವ, ಉದಾರ ಗುಣ ನನ್ನಮೇಲೆ ಬಹಳ ಪ್ರಭಾವ ಬೀರಿದೆ. ಮಡಿ ಮೈಲಿಗೆ ಏನೆಂಬುದು ಇವರ ಮನೆಯೆಲ್ಲಿಯೇ ತಿಳಿದದ್ದು. ಖೇದವೆಂದರೆ ಆದರೆ ಅದ್ಯಾವುದನ್ನು ಈಗ ಪಾಲಿಸಲಾಗುತ್ತಿಲ್ಲ . ಆ ವಿಷಯ ಬೇರೆ.
ಚಿಕ್ಕ ವಯಸ್ಸಾಗಿದ್ದರಿಂದ ಊಟ ಆಟ ಗಳಲ್ಲೇ ಹೆಚ್ಚು ಗಮನ ನಮ್ಮದು. ಅಣ್ಣ ನ ಬುದ್ದಿವಂತಿಕೆ, ಸಾಹಿತ್ತ್ಯದ ಮೇಲಿನ ಅವರ ಆಸಕ್ತಿ,ಅವರ ವ್ಯಕ್ತಿತ್ವ ಉಳಿದ ವಿಷಯಗಳ ಕಡೆಗೆ ನನ್ನ ಲಕ್ಷ್ಯಹರಿಯಲಿಲ್ಲ ಆದರೆ ಈಗ ಕೇಳಿ ತಿಳಿದುಕೊಂಡಿದ್ದೇನೆ.
ಅಣ್ಣನ ದಿನ ಪ್ರಾರಂಭ ದೇವರ ಪೂಜೆಯೊಂದಿಗೆ ಅದಕ್ಕಾಗಿ ಹೂವು ಕೀಳುವ ಕೆಲಸ ಅವರ ಮಕ್ಕಳಾದ ಗೋಪಿ ಮತ್ತು ಪೌನಿ. ಗೇಟಿನ ಮೇಲೆ ಮಲ್ಲಿಗೆಯ ಬಳ್ಳಿಯ ತುಂಬಾ ಹೂವು ನಾನೂ ಹೂವು ತೆಗೆವುವ ದಕ್ಕೆ ಸಹಾಯ ಮಾಡುತ್ತಿದ್ದೆ. ಪೂಜೆ ಆದ ನಂತರ ಕೊಡುವ ತೀರ್ಥ ದ ರುಚಿಯೇ ಬೇರೆ. ಅಣ್ಣನ ಮನೆಯ ದ್ವಾದಶಿಯ ಕಡುಬಿನ ಊಟವನ್ನು ನೆನೆದರೆ ಇನ್ನು ಬಾಯಲ್ಲಿ ನೀರುರತ್ತೆ. ಅಮ್ಮ ಮಾಡುವ ಬೆಸನಲಡ್ಡುವಿನ ಕಂಪು ಮೂಗಿನಲ್ಲಿದೆ ಇನ್ನು.
ಅಣ್ಣ ನಿಗೆ ನೇರಳೆಹಣ್ಣೆಂದರೆ ಬಹಳ ಇಷ್ಟ್ಟಅವರ ಸ್ನೇಹಿತರಾದ ತಿರುಮಲರಾವ್ ರ ಮನೆಯಿಂದ ವಿಜ್ಜು ತರುತ್ತಿದ್ದದ್ದು ನೆನೆಪು. ಸ್ಟೋರ್ ರೂಂ ನಲ್ಲಿ ಇಟ್ಟ ನೇರಳೆ ಹಣ್ಣು ಗಳನ್ನೂ ಕದ್ದು ತಿನ್ನುವ ನಮ್ಮ ಹೊಂಚನ್ನು ವಿಫಲ ವಾಗಿಸಿ ಎಲ್ಲರಿಗೆ ಕೊಟ್ಟು ತಾವು ತಿನ್ನುತ್ತಿದ್ದರು ಅಣ್ಣ. ಇನ್ನು ಮಧ್ಯಾಹ್ನದ ದ ಮೊಸಂಬಿಯ ರಸ .ಅದನ್ನು ದಿನವು ಆಫೀಸ್ ಗೆ ಅಣ್ಣನಿಗಾಗಿ ಕಳಿಸುವ ರೂಢಿ. ರಾಗು ವಿಜ್ಜು ಗೋಪಿ ಪೌನಿ ಇವರಲ್ಲಿ ಯಾರಾದರು ಒಬ್ಬರು ರಸ ತೆಗೆದು ಕಳಿಸುತ್ತಿದ್ದರು. ಹೆಚ್ಚಾಗಿ ವಿಜ್ಜು ಮಾಡುತ್ತಿದ್ದದ್ದು ನನಗೆ ಜ್ಞಾಪಕ. ನಾವೆಲ್ಲ ಸುತ್ತು ಕುಳಿತು ರಸ ತೆಗೆದಾದ ಮೇಲೆ ಉಳಿದ ರಸ ಮತ್ತು ತೊಳೆಗಳನ್ನು ತಿನ್ನುವದಕೊಸ್ಕರ ಕಾಯುತ್ತಿದ್ದೆವು. "ರೀಟಾ ಐಸ್ ಕ್ರೀಂ" ಗಾಗಲಿ ,ಸಿನೆಮಾ ಹೋಗುವ್ದಕ್ಕಾಗಲಿ ಕೇಳುವದಕ್ಕೆಉಳಿದವರು ನಮ್ಮನ್ನುಮುಂದೆ ಮಾಡುತ್ತಿದ್ದರು ಕಾರಣ ನಾವು ಕೇಳಿದರೆ ಅಣ್ಣ ಆಗಲಿ ಅಮ್ಮ ಆಗಲಿ ಬೇಡವೆನ್ನುತ್ತಿರಲ್ಲಿಲ್ಲ. ಏಕೆಂದರೆ ನಾವು ಮುದ್ದಿನ ಮೊಮ್ಮಕ್ಕಳಾ ಗಿದ್ದೆವು. (ಮೊದಲನೆ ಸೆಟ್)
ಗುರುವಾರ ರಾಯರ ಮಟಃಕ್ಕೆ ಹೋಗುವದನ್ನು ಎಂದು ತಪ್ಪಿಸುತ್ತಿರಲಿಲ್ಲ ಅಣ್ಣಾ . ಬಹಳ ವೇಗವಾಗಿ ನಡೆಯುತ್ತಿದ್ದರು ಅವರ ಹಿಂದೆ ಅಮ್ಮ ಸುಧಮ್ಮನ ಕೈ ಹಿಡಿದು ಓಡಬೇಕಾಗುತ್ತಿತ್ತು.ಅಣ್ಣ ನದುತುಂಬಾ ಅವಸರ ಮಾಡುವ ಸ್ವಭಾವ. ಬಹಳ ಶಾಂತ ಚಿತ್ತರು ಆದರೆ ಕೋಪ ಬಂದರೆ "ನರಸಿಂಹ ಅವತಾರ "ಎಂದು ಅಮ್ಮ ಹೇಳುತ್ತಿದ್ದದು ಕೇಳಿದ್ದೆ .
ಅಣ್ಣಾ ನಿಗೆ ತುಂಬಾ "ವಿಲ್ ಪವರ್" ಅವರು ಟ್ರಾನ್ಸ್ಗೆ ಹೋಗುತ್ತಿದ್ದರೆಂದು ಕೇಳಿದ ವಿಷಯ .
ನಾನು ಹೊಸದಾಗಿ ಕಲಿತ ಒಂದು ಯುಕ್ತಿ ಯನ್ನು ಎಲ್ಲರ ಮುಂದೆ ಪ್ರದರ್ಶಿಸುವ ಇಚ್ಚೆ .
"ಸಾಯಿಬಾಬ"ಎಂದು ಭವಿಷ್ಯ ಹೇಳುವ ಸಾಹಸ ಆದರೆ ಅಣ್ಣ ನ ವಿಲ್ ಪವರ್ ಮುಂದೆ ಅದು "ಫ್ಲಾಪ್ ಶೋ"ಆಯಿತು. ಈಗಲೂ ನೆನೆಸಿ ಕೊಂಡುನಗುತ್ತೇನೆ.
ನಮ್ಮ ದುರುದೃಷ್ಟ ವಿಧಿ ಅಣ್ಣ ನನ್ನು ಬಲುಬೇಗ ಕರೆಯಿಸಿಕೊಂಡಿತು ಅವರನ್ನು ಇನ್ನು ಹತ್ತಿರದಿಂದ ತಿಳಿದು ಕೊಳ್ಳುವ ಅವಕಾಶ ತಪ್ಪಿತು.
ಅವರ ಈ ಶತಮನೋಸ್ತವ ದ ಸಮಯ ದಲ್ಲಿ ಅವರನ್ನು ಸ್ಮರಸಿ ಕೊಂಡು ನಮ್ಮ ಬಾಲ್ಲ್ಯದ ದಿನಗಳನ್ನು ಸಂತೋಷಮಯ ವಾಗಿಸಿದ್ದಕ್ಕೆ ಅಣ್ಣ ಮತ್ತು ಅವರ ಕುಟುಂಬ ದ ಬಗ್ಗೆ ಹೆಮ್ಮೆ ಪಡುತ್ತೇವೆ. ನೆನೆಪಿದ್ದ ಸಂಗತಿಗಳನ್ನು ಬರೆದ್ದಿದ್ದೇನೆ.
ಒಂದು ಚಿಕ್ಕ "ಶ್ರದ್ಧಾಂಜಲಿ ನನ್ನ ರೀತಿಯಲಿ".
ಮೀರಾ ಕುಲಕರ್ಣಿ.
ಚಿತ್ರ ವಿವರ:. ಎಡಭಾಗದಲ್ಲಿರುವುದು ಮಾನ್ವಿ ನರಸಿಂಗರಾಯರು. ಕೊನೆಯದು ಲೇಖಕಿ ಮೀರಾ ಕುಲಕರ್ಣಿ ಅವರ ಇತ್ತೀಚಿನ ಚಿತ್ರ. ಬಲಭಾಗದಲ್ಲಿ ಮೇಲಿರುವುದು ವಿಶೇಷ ಚಿತ್ರ. ಮೀರಾ ಕುಲಕರ್ಣಿ ಅವರು ಎರಡು ವರ್ಷದವರಿದ್ದಾಗ ಮಾನ್ವಿ ನರಸಿಂಗರಾಯರ ಮಕ್ಕಳೊಂದಿಗೆ ಇದರಲ್ಲಿದ್ದಾರೆ.
ಮೀರಾ ಅವರ ಪಕ್ಕ Pawan Kumar Manvi(Poni). ಅವರು ETV Kannada Director ಆಗಿದ್ದರು. ಅವರ ಸಹೋದರ vijay(vijju), ಮೀರಾ ಅವರ ಸಹೋದರ ಹಾಗೂ Gopal Manvi (Gopi).
ಮೀರಾ ಕುಲಕರ್ಣಿ ಅವರಿಗೆ ಧನ್ಯವಾದಗಳು 🌷🙏❤️
ಕಾಮೆಂಟ್ಗಳು