ನೂತನೋತ್ಸಾಹಗಳ ಚಿಲುಮೆಯಂದ
ಹಕ್ಕಿದೋಣಿಯ ರೆಕ್ಕೆವುಟ್ಟಿನ ಸುಯ್ಲು
ಗಾಳಿಕೊಳದಲಿ ತೆರೆಯನೇಳಿಸಿರಲು,
ಹುಲ್ಲು ಹೂವಿನ ಕೊರಳು ಕೊರಳಿನ ಸುತ್ತ
ರತ್ನ ಕಂಠೀಹಾರ ರಾಜಿಸಿರಲು-
ಯಾವುದೋ ಹೊಸಹುಟ್ಟು ನಮ್ಮನೆಚ್ಚರಿಸಿರಲು
ಕೊಳೆ ಬದುಕಿನಿಂದ,
ಅದೊ ಬಂತು ಮೇಲೇರಿ ಬಂತು ನೇಸರ ಕಿರಣ
ನೂತನೋತ್ಸಾಹಗಳ ಚಿಲುಮೆಯಂದ !
(ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಯಿಂದ)
Photo @ Kukkarahalli Lake, Mysore on 6.7.2012
ಕಾಮೆಂಟ್ಗಳು