ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೊಲ್ಲೂರು ಮೂಕಾಂಬಿಕೆ


ಕೊಲ್ಲೂರು ಮೂಕಾಂಬಿಕೆ


ಕೊಲ್ಲೂರ ಸಿರಿದೇವಿ ಮೂಕಾಂಬಿಕೆ

ಕರುಣೆಯಲಿ ನೋಡಮ್ಮ ಜಗದಂಬಿಕೆ ..


ಬಿ. ಕೆ. ಸುಮಿತ್ರಾ ಅವರು ಹಾಡಿದ ಈ ಹಾಡು ಪ್ರತಿದಿನ ಕೇಳ್ತಿದ್ವಿ.  ಮತ್ತೊಂದು ಹಾಡು ಕೆ. ಜೆ. ಯೇಸುದಾಸ್ ಅವರದು...

ಕುಡಚಾದ್ರಿಯಿಲ್ ಕುಡಿಕೊಳ್ಳುಮ್ ಮಹೇಶ್ವರಿ

ಗುಣದಾಯಿನಿ ಸರ್ವಶುಭಕಾರಿಣಿ

ಈ ಸಂಗೀತ ಗುಣವೊ ಅಥವಾ ಆ ಹೆಸರಲ್ಲೇ ಆ ಗುಣವೊ, ಈ ಹಾಡುಗಳನ್ನು ಕೇಳಿದರೆ ಅದೆಂತದ್ದೋ ಭರವಸೆ!

ದಕ್ಷಿಣ ಕನ್ನಡ ಪ್ರವಾಸ ಹೋದಾಗ, ಧರ್ಮಸ್ಥಳ, ಉಡುಪಿ, ಶೃಂಗೇರಿ, ಹೊರನಾಡು ಎಂದು ಹೋದಾಗ ಕೊಲ್ಲೂರು ಕೂಡಾ ಅತ್ಯಂತ ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಳ್ಳುತ್ತದೆ.  

ಸುತ್ತಲೂ ಕೊಡಚಾದ್ರಿ ಬೆಟ್ಟ, ಮಧ್ಯೆ ಪುಟ್ಟ ಪುಟ್ಟ ಹಲವು ಮನೆಗಳು ಮತ್ತು ಬಂದವರಿಗೆ ವಸತಿ ಮತ್ತು ಆತಿಥ್ಯದ ವಾತಾವರಣದ ನಡುವಿನ ಈ ಪ್ರಶಾಂತ ಸ್ಥಳದಲ್ಲಿನ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮತ್ತು ಕೊಲ್ಲೂರಿನಲ್ಲಿದ್ದಾಗ ಅದೆಂತದ್ದೋ ಶಾಂತಿ ಮನವನಾವರಿಸುತ್ತದೆ. 


ಪೌರಾಣಿಕ ಹಿನ್ನಲೆ, ಆಧ್ಯಾತ್ಮಿಕ ಕಥನ, ರಾಜಮಹಾರಾಜರುಗಳಿಂದ ಮತ್ತು  ಜನಸಾಮಾನ್ಯರಿಂದ ಭಾಷಾತೀತವಾಗಿ ಏಕತ್ರ ಭಕ್ತಿಭಾವದಿಂದ ಆಕರ್ಷಿಸುತ್ತಿರುವ ಈ ಊರು ಮತ್ತು ದೇವಿಯ ಸನ್ನಿಧಿ ಎಲ್ಲ ರೀತಿಯಲ್ಲೂ ದಿವ್ಯಕ್ಷೇತ್ರವಾಗಿ ಪುನಃ ಪುನಃ ಭೇಟಿ ನೀಡುವ ಭಾಗ್ಯದಾಶಯವನ್ನು ಮನದಲ್ಲಿ ಮೂಡಿಸುವಂತದ್ದು 😇🌷🙏🌷😇


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ