ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ


ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ
ಸಂಗೀತ ಸಾಹಿತ್ಯ ಸಕಲಕಲಾ ವಿಶಾರದೆ
ತುಂಗಾ ನದೀತೀರ ಪೀಠಸ್ತಿತೆ
ಬಂಗಾರ ರಕ್ಷಿಸುವ ಲಕ್ಷ್ಮೀಯುತೆ
ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ
ಸಂಗೀತ ಸಾಹಿತ್ಯ ಸಕಲಕಲಾ ವಿಶಾರದೆ

ಸತ್ಯಶಿವ ಸುಂದರತೆ ಸಾಕಾರವಾಗಿ
ನಿತ್ಯನಿರ್ಮಲಜ್ಞಾನ ಜ್ಯೋತಿ ಬೆಳಗಿ
ನರ್ತಿಸೆ ದೇವಿ ನಾಲಿಗೆ ಮೇಲೆ
ಆಪ್ತಜನರ ಸಖಿ ಕರುಣಾವಿಶಾಲೆ
ಶೃಂಗೇರಿ ಗೀರ್ವಾಣಿ ಶ್ರೀವಾಣಿ ಶಾರದೆ
ಸಂಗೀತ ಸಾಹಿತ್ಯ ಸಕಲಕಲಾ ವಿಶಾರದೆ

ಚಿತ್ರ: ಕಾವೇರಿ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ ಪಿ. ಸುಶೀಲ



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ