ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಭಿರುಚಿ ಚಂದ್ರು


 ಅಭಿರುಚಿ ಚಂದ್ರು


ಅಭಿರುಚಿ ಚಂದ್ರು ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. 

ಅಭಿರುಚಿ ಚಂದ್ರು ಮೂಲತಃ ನಂಜನಗೂಡಿನವರು. ರಂಗಭೂಮಿಯಲ್ಲಿ ಸಂಭಾಷಣೆಕಾರರಾಗಿ, ನಿರ್ದೇಶಕರಾಗಿ ಕ್ರಿಯಾಶೀಲರಾಗಿದ್ದರು.  ಅವರು ಸುಚಿತ್ರಾ ಟ್ರಸ್ಟ್ ನಲ್ಲಿ ಟ್ರಸ್ಟಿಯಾಗಿದ್ದರು.  ಸುಚಿತ್ರಾದಲ್ಲಿ ಬಹುಕಾಲ ಸಾಹಿತ್ಯ ಸಂಜೆ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದರು. 

ಅವರದೊಂದು ಕವನ ಹೀಗಿತ್ತು:

ದಣಿದಿದೆ ಕಣ್ಣಕ್ಯಾಮೆರಾ
ಒಣನೆಲದಾಳದಿಂದ ಮತ್ತೆ
ಚಿಗುರು ಪಲ್ಲವಿಸುವ ಹತಾಶ ನಿರೀಕ್ಷೆಯಲ್ಲಿ
ಹೆಣಭಾರದ ದಣಿವು ಕಣ್ಣರೆಪ್ಪೆಗಳ ಹೆಗಲಲ್ಲಿ
ಹೊತ್ತುಸಾಗಲಾಗದೇ,
ಅನುಕ್ಷಣವೂ ತೆರೆದಿಟ್ಟು ನೋಡಲಾಗದೆ
ಸೋತ, 
ಹೊರಟ ತಪ್ಪಿಗೆ ಗಮ್ಯ ಸೇರಿ
ಸುಧಾರಿಸಬಹುದೆನ್ನುವ ಉಮೇದಿದ್ದರೂ,
ಬೆಂಬಿಡದ ಭೂತದ ಭಾರಕ್ಕೆ,
ನಿಗಿನಿಗಿಸುವ ವರ್ತಮಾನದ ನಿಷ್ಠುರ ಪ್ರಹಾರಕ್ಕೆ,
ಬೆಚ್ಚಿಬೀಳಿಸುತ್ತಲೇ ಇರುವ ಭವಿಷ್ಯದಂಧಕಾರಕ್ಕೆ
ಬೆದರಿ
ಬೆಂಡಾಗಿ
ಬೆಂದುಬಸವಳಿದ ಕಂಗಳು
ಹಾಡಬಯಸಿದೆ ವಿದಾಯಗೀತೆ

ಕೈಕಾಲುಗಳಿಗೆ,
ಕಿವಿಬಾಯಿಮೂಗುಗಳಿಗೆ,
ಚೈತನ್ಯದ ಬ್ಯಾಟರಿಯ
ನಿರಂತರ ಚಾಲನೆಯಲ್ಲಿಟ್ಟ
ಹೊಟ್ಟೆ ಕರುಳು ಕಿಡ್ನಿಗೆ,
ನಾಳೆಯೆನ್ನುವ ನಿಗೂಢಸಂಪುಟವು
ಇಂದಿನಂತಿರಲಾರದೆಂದು
ಇಂದ್ರಜಾಲದ ಕನಸಿನಕಲ್ಪತರುವಿಗೆ
ನೀರೆರೆಯುತ್ತಲೇಹೋದ
ಕಾಣದ ಮನಸಿಗೆ,
ನಿಡುದಾರಿಯ ನಿರರ್ಥಕ ಪಯಣದಲಿ
ಲಾಭದ ಲೋಭವಿರಿಸಿಕೊಳ್ಳದೇ,
ನಷ್ಟದ ಪರಿವೆಮಾಡದೇ,
ಜತೆಸಾಗಿದ ಸಹಜಸಂಗಾತಿಗಳಿಗೆಲ್ಲ
ಕಣ್ಣು
ಹೇಳಬಯಸಿದೆ ವಿದಾಯ
ಮುಚ್ಚುವಮುನ್ನ.


ಅಭಿರುಚಿ ಚಂದ್ರು2023ರ ಏಪ್ರಿಲ್ 7ರಂದು ನಿಧನರಾದರು. 

great theatre activist Abhiruchi Chandru 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ