ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ವಿ. ಶಿವಸ್ವಾಮಿ


 ಭಗವದ್ಗೀತಾಚಾರ್ಯ ಕೆ. ವಿ.  ಶಿವಸ್ವಾಮಿ

Bhagavad Geethacharya Shivaswamy Kv

ಶಿವಮೊಗ್ಗ ಜಿಲ್ಲೆಯವರಾದ ಕೆ. ವಿ. ಶಿವಸ್ವಾಮಿ ಅವರು ಕಳೆದ 16 ವರ್ಷಗಳಿಂದ  ಭಗವದ್ಗೀತೆಯನ್ನು ಜನರಿಗೆ ನಿರಂತರವಾಗಿ, ಯಾವುದೇ ಶುಲ್ಕವಿಲ್ಲದೆ  ಬೋಧಿಸುತ್ತ ಬಂದಿದ್ದಾರೆ. ಇವರು ತಮ್ಮ ಜೀವನವನ್ನು ಶ್ರೀ ಕೃಷ್ಣನ ಸೇವೆಗೆ ಮತ್ತು ಭಗವದ್ಗೀತೆಯ ಪ್ರಚಾರಕ್ಕೆ ಮುಡಿಪಾಗಿಟ್ಟಿದ್ದಾರೆ. ಇವರಿಗೆ, ಭಾರತ , ಅಮೆರಿಕ,  ಆಫ್ರಿಕ, ಯೂರೋಪ್ ಮತ್ತು ಪೂರ್ವ  ಏಷ್ಯಾದಲ್ಲಿ ಅನೇಕ ಶಿಷ್ಯರಿದ್ದಾರೆ.

ಶಿವಸ್ವಾಮಿ ಅವರು ಶೃಂಗೇರಿಯಲ್ಲಿ ಬಿ.ಎ. ಪದವಿಯ ನಂತರ, ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಡಿಪ್ಲೋಮಾ ಪಡೆದರು. 

ಕೊಪ್ಪದ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿದ ಶಿವಸ್ವಾಮಿ ಅವರು ಮುಂದೆ ಶಿವಮೊಗ್ಗ ಮತ್ತು ಹರಿಹರಪುರಗಳಲ್ಲಿ ಅಧ್ಯಾಪನ ನಡೆಸಿದರು. ಶಿವಮೊಗ್ಗ, ಭದ್ರಾವತಿ, ಬಸರಿಕಟ್ಟೆ ಮುಂತಾದೆಡೆ ವಿಶೇಷ ಇಂಗ್ಲಿಷ್ ಬೋಧಕರಾಗಿಯೂ ಅನೇಕ ಸಂಸ್ಥೆಗಳಲ್ಲಿ ಇವರ ಸೇವೆ ಸಂದಿತು. 

ಶಿವಸ್ವಾಮಿ ಅವರಿಗೆ ತಮಿಳುನಾಡಿನ ಅನುಸೋನಿಯ ಹಂಸಾಶ್ರಮದ ದಿವಂಗತ ಶ್ರೀ ವಿರಜೇಶ್ವರ ಸ್ವಾಮೀಜಿ ಅವರಿಂದ ಗೀತೆಯ ಸಂದೇಶವನ್ನು ಸಮಾಜದೆಲ್ಲೆಡೆ ಪಸರಿಸಲು ಪ್ರೇರಣೆಯಾಯಿತು. ಪೊನ್ನಂಪೇಟೆಯಲ್ಲಿದ್ದ ಶ್ರೀರಾಮಕೃಷ್ಣ ಮಠದ ಸ್ವಾಮಿ ಜಗದಾತ್ಮಾನಂದಜೀ ಅವರ ಪ್ರೋತ್ಸಾಹ ಆಶೀರ್ವಾದವೂ ಇವರ ಈ ಕಾರ್ಯಕ್ಕೆ ಸಂದಿತು. ಹೀಗೆ 2000ದ ಇಸವಿಯಿಂದ ಆರಂಭಗೊಂಡಂತೆ ಎಲ್ಲ ಹದಿನೆಂಟು ಅಧ್ಯಾಯಗಳ ಶ್ಲೋಕಗಳನ್ನೂ ಪಠಿಸುವುದು ಇವರ ಅಭ್ಯಾಸವಾಯಿತು. 
ಸಿರ್ಸಿಯ ಶ್ರೀ ಸೊಂದಾ ಸ್ವರ್ಣವಲ್ಲೀ ಮಠದ ಭಗವದ್ಗೀತಾ ಅಭಿಯಾನದಲ್ಲಿ ಮಾರ್ಗದರ್ಶಿಗಳಾಗಿ ಸಕ್ರಿಯ ಭಾಗವಹಿಕೆ ನೀಡಿದರು. 

ಮುಂದೆ ಶಿವಸ್ವಾಮಿ ಅವರ ಗೀತಾ ಪ್ರವಚನಗಳು ಶಾಲಾ ಕಾಲೇಜುಗಳಲ್ಲಿ, ನಾಡಿನ ನೂರಾರು ವೇದಿಕೆಗಳಲ್ಲಿ, ಕಿರುತೆರೆಯ ವಾಹಿನಿಗಳಲ್ಲಿ, ಅಮೆರಿಕದ ಹಲವಾರು ಕೇಂದ್ರಗಳನ್ನು ಒಳಗೊಂಡಂತೆ ಹಲವು ದೇಶಗಳಲ್ಲಿ ನಿರಂತರ ನಡೆಯುತ್ತ ಬಂದಿವೆ. 

ಶಿವಸ್ವಾಮಿ ಅವರ ಯೂಟ್ಯೂಬ್ನಲ್ಲಿರುವ
(https://www.youtube.com/watch?v=NQO52ImI4Mg ಮತ್ತು
   https://www.youtube.com/user/kvshivaswamy/playlists​) ಚಾನೆಲ್ಗಳು
ಅಸಂಖ್ಯಾತ ವೀಕ್ಷಣೆಗಳಿಂದ ಜನಪ್ರಿಯಗೊಂಡಿದೆ. ಶಿವಮೊಗ್ಗದಲ್ಲಿ ಇವರ ನೇರ ಉಚಿತ ತರಗತಿಗಳಲ್ಲಿ ಅಸಂಖ್ಯಾತ ಮಂದಿ ಲಾಭ ಪಡೆದಿದ್ದಾರೆ.  Zoom  ಮೂಲಕ ಸಹಾ ಇವರ ತರಗತಿಗಳ ಲಾಭ ಪಡೆಯಬಹುದಾಗಿದೆ. 

ಆಚಾರ್ಯ ಶಿವಸ್ವಾಮಿ ಅವರನ್ನು ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. 

"ಭಗವದ್ಗೀತೆ ಜಾತ್ಯಾತೀತ, ಇದಕ್ಕೆ ಯಾವುದೇ ಜಾತಿ ಮತ, ಮೇಲು ಕೀಳು, ತಾರತಮ್ಯ ಇಲ್ಲ. ಎಲ್ಲರೂ ಕಲಿತು, ಜೀವನದ ಮೌಲ್ಯಗಳನ್ನು ಅರಿಯಬಹುದಾದ, ಜನಸಾಮಾನ್ಯರ ವ್ಯಕ್ತಿ ವಿಕಸನಕ್ಕೆ ದಾರಿದೀಪವಾದ ಗ್ರಂಥ ಭಗವದ್ಗೀತೆ" ಎಂಬುದು ಶಿವಸ್ವಾಮಿ ಅವರ ಅನುಭವದ ಮಾತು. 

ಭಗವದ್ಗೀತೆ ಆನ್ ಲೈನ್ ತರಗತಿಗಳಿಗೆ ಸೇರಲು ಈ ಕೆಳಕಂಡ ಈ-ಮೇಲ್ ಸಂಪರ್ಕಿಸಬಹುದು
kvshivaswamy@gmail.com

Thank you Ranjani Gr for the invaluable information 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ