ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ

ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ

ಪಚ್ಚೆ ಕಾಡಿನ ನಡುವೆ, ಸ್ವಚ್ಛ ಪ್ರೀತಿಯ ಧಾರೆ
ಪಚ್ಚೆ ಕಾಡಿನ ನಡುವೆ, ಸ್ವಚ್ಛ ಪ್ರೀತಿಯ ಧಾರೆ
ಸಂಗೀತ ಹಾಡುತ ಬಂದ ಬೆರಗು
ಜಾರು ಜಲಪಾತ, ವಿಧವಿಧ ಅವತಾರ
ಹಸಿರು ಈ ವನ ತಾಯ್ಗೆ ಚೆಂದ ಸೆರಗು
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ

ಮಣ್ಣು ಗಂಧವ ಹರಡಿ, ಮೌನ ಹಂದರ ಹಾಸಿ
ಮಣ್ಣು ಗಂಧವ ಹರಡಿ, ಮೌನ ಹಂದರ ಹಾಸಿ
ಈ ಕಾಡು ತಾನಾಗಿ ತಂದ ನಿಧಿಯು
ಮಾತು ತಿಳಿದಾತ ಮರಗಿಡ ಕೊಂದಾಗ
ವನದ ಮೌನಕೆ ತಾಳ್ಮೆ ಎಲ್ಲಿಯವರೆಗು
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
ಕಾಯುವ ತಾಯೆ, ಕಾಯುವ ತಾಯೆ.

ಚಿತ್ರ: ಕಾಡಿನ ಬೆಂಕಿ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಬಿ.ಆರ್.ಛಾಯ




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ