ಶ್ರೀನಗರ ಕಿಟ್ಟಿ
ಶ್ರೀನಗರ ಕಿಟ್ಟಿ
ಶ್ರೀನಗರ ಕಿಟ್ಟಿ ಕನ್ನಡದ ಪ್ರತಿಭಾನ್ವಿತ ಕಲಾವಿದ.
ಶ್ರೀನಗರ ಕಿಟ್ಟಿ ಎಂದೇ ಪ್ರಸಿದ್ಧವಾಗಿರುವ ಕೃಷ್ಣ 1977ರ ಜುಲೈ 8ರಂದು ಬೆಂಗಳೂರಿನಲ್ಲಿ ಜನಿಸಿದರು.
ಶ್ರೀನಗರ ಕಿಟ್ಟಿ ಬಾಲ್ಯದಿಂದಲೇ ಕಿರುತೆರೆಯಲ್ಲಿ ಅಭಿನಯಿಸಲು ಆರಂಭಿಸಿದರು. ಬಾಲನಟನಾಗಿ 'ಮಲೆನಾಡಿನ ಚಿತ್ರಗಳು', 'ದೊಡ್ಮನೆ', 'ಕಂದನ ಕಾವ್ಯ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದರು.
ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದ ಕಿಟ್ಟಿ 'ಕಾಡು', 'ಕಪ್ಪೆ ಭಾವಿ ನಕ್ಷತ್ರ', 'ಅಕ್ಕ', 'ಸಂಜೆ ಮಲ್ಲಿಗೆ' ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಶಿಕ್ಷಣ ಮುಗಿದ ನಂತರ ನಟನಾಗಿ ‘ಚಂದ್ರಿಕಾ', ‘ಪ್ರೀತಿಗಾಗಿ', ‘ಆನಂದ ಸಾಗರ', ‘ಮನೆ ಮನೆ ಕಥೆ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದರು.
ಶ್ರೀನಗರ ಕಿಟ್ಟಿ 2003 ರಲ್ಲಿ ತೆರೆಕಂಡ ‘ಚಂದ್ರ ಚಕೋರಿ' ಚಿತ್ರದಲ್ಲಿ ಖಳನಾಯಕನಾಗಿ ಚಿತ್ರಜೀವನ ಆರಂಭಿಸಿದರು. ನಂತರ ಮತ್ತೆರೆಡು ವರ್ಷ ‘ಗೌಡ್ರು', ‘ಲವ್ ಸ್ಟೋರಿ', ‘ಆದಿ' , ‘ಅಯ್ಯ' ಮುಂತಾದ ಚಿತ್ರಗಳಲ್ಲಿ ನಕಾರಾತ್ಮಕ ಪಾತ್ರಗಳಲ್ಲಿ ನಟಿಸಿದರು. 2005ರಲ್ಲಿ ತೆರೆಕಂಡ ‘ಗಿರಿ' ಚಿತ್ರದಿಂದ ನಾಯಕನಾಗಿ ಹೊಸ ಅಧ್ಯಾಯ ಆರಂಭಿಸಿದರು. ನಾಯಕನಾಗಿ ಇವರಿಗೆ ಕೀರ್ತಿ ತಂದು ಕೊಟ್ಟ ಚಿತ್ರ ದುನಿಯಾ ಸೂರಿ ನಿರ್ದೇಶನದ ‘ಇಂತಿ ನಿನ್ನ ಪ್ರೀತಿಯ'. ನಂತರ ‘ಸವಾರಿ', ‘ಸಂಜು ವೆಡ್ಸ್ ಗೀತಾ', ‘ಹುಡುಗರು', ‘ಕೋಕೋ', ‘ಬಹುಪರಾಕ್', 'ಲವರ್ ಬಾಯ್', 'ಗರುಡ', 'ಅವತಾರ ಪುರುಷ', 'ಗೌಳಿ', 'ರೇಜಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಯಶಸ್ಸು ಮತ್ತು ಜನಪ್ರಿಯತೆ ಇವರೊಂದಿಗಿದೆ.
ಶ್ರೀನಗರ ಕಿಟ್ಟಿ ರವಿ ಬೆಳಗೆರೆ ಪುತ್ರಿ ಕಿರುತೆರೆ ನಿರ್ಮಾಪಕಿ ಭಾವನಾ ಬೆಳಗೆರೆಯವರನ್ನು ವಿವಾಹವಾಗಿದ್ದಾರೆ.
ಹುಟ್ಟುಹಬ್ಬ ಆಚರಿಸುತ್ತಿರುವ ನಮ್ಮ ಕನ್ನಡದ ಪ್ರತಿಭೆ ಶ್ರೀನಗರ ಕಿಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.
Our talent Srinagara Kitti
ಕಾಮೆಂಟ್ಗಳು