ಕಲಾಶ್ರೀ ಆನಂದ್
ಕಲಾಶ್ರೀ ಆನಂದ್
ಕಲಾಶ್ರೀ ಆನಂದ್ ಅವರು "ಆಂತರಿಕ ಶಕ್ತಿಯಿಂದ ಬದುಕನ್ನು ಉದ್ದೀಪನಗೊಳಿಸಿಕೊಳ್ಳಲು ಅನೇಕರಿಗೆ ಮಾರ್ಗದರ್ಶನ" ನೀಡುತ್ತ ಹೆಸರುವಾಸಿಯಾಗಿದ್ದಾರೆ. ಅವರೋರ್ವ Reiki healer, Shamanic practitioner, intuitive Oracle card reader and mindset transformation coach ಆಗಿ ಹೆಸರುವಾಸಿಯಾಗಿದ್ದಾರೆ.
ಅಕ್ಟೋಬರ್ 27, ಕಲಾಶ್ರೀ ಅವರ ಹುಟ್ಟುಹಬ್ಬ. ಇವರದ್ದು ಒಂದೆಡೆ ಪ್ರಸಿದ್ಧ ಸಂಗೀತ ಕುಟುಂಬ. ಇವರ ತಂದೆ ವಿದ್ವಾನ್ ಎ.ವಿ. ಆನಂದ್ ನಾಡಿನ ಮಹಾನ್ ಹಿರಿಯ ಮೃದಂಗ ವಾದಕರು. ಮತ್ತೊಂದೆಡೆ ಇವರದ್ದು ಪ್ರಸಿದ್ಧ ಸಾಹಿತ್ಯಕ ಕುಟುಂಬ. ಕಲಾಶ್ರೀ ಅವರು ನಾಡಿನ ಮಹಾನ್ ಸಾಹಿತಿಗಳಾಗಿ ಹೆಸರಾದ ಪ್ರೊ. ವೇಣುಗೋಪಾಲ ಸೊರಬರ ಸೊಸೆ. ಕಲಾಶ್ರೀ ಅವರ ಪತಿ ವ್ರಜಬಾಲ ಸೊರಬ ಅವರು ಹೆಸರಾಂತ ಇಂಗ್ಲಿಷ್ ಪತ್ರಿಕೆಯ ಹಿರಿಯ ಸಂಪಾದಕರಾಗಿದ್ದಾರೆ.
ಕಲಾಶ್ರೀ ಅವರು ಓದಿದ್ದು ವಾಣಿಜ್ಯ. ಕಲಿತದ್ದು ಸಂಗೀತ. ಆದರೆ ಒಲಿದದ್ದು ಬೇರೆ ಪ್ರಪಂಚಕ್ಕೆ. 18ರ ಎಳೆ ವಯಸ್ಸಿನಲ್ಲಿ ಜಪಾನ್ ಮೂಲದ ಚಿಕಿತ್ಸೆಯಾದ ರೇಖಿ (Reiki) ಕಲಿತ ಇವರ ಬದುಕಲ್ಲಿ, ಹಲವಾರು ಅವಕಾಶದ ದ್ವಾರಗಳು ತೆರೆದುಕೊಂಡವು. ಎನರ್ಜಿ-ಹೀಲಿಂಗ್ ಕ್ಷೇತ್ರದಲ್ಲಿನ ಹಲವಾರು ಸೂಕ್ಷ್ಮ ಆಯಾಮಗಳನ್ನು ಒಳ ಹೊಕ್ಕು ಪರಿಣತಿ ಸಾಧಿಸಿದರು. ಎಳೆವಯಸ್ಸಿನಲ್ಲೇ ಘಾಸಿಕರ ಕಿರುಕುಳಕ್ಕೆ ಒಳಗಾದ ವಿಷಯ ಸೆರಗಿನಲ್ಲಿದ್ದ ಕೆಂಡದಂತೆ ನಿಗಿ-ನಿಗಿ ಉರಿಯುತ್ತಿತ್ತು. ಈ ನಿಟ್ಟಿನಲ್ಲಿ ರೇಖಿಯಿಂದ ಸಹಾಯ ಪಡೆದುಕೊಂಡು ತಮ್ಮ ಹಲವಾರು ಸಮಸ್ಯೆಗಳನ್ನು ಹತ್ತಿಕ್ಕಿದರು. ಇಷ್ಟರ ಮಧ್ಯೆ ಜೀವನದ ಕರೆಗೆ ಓಗೊಟ್ಟು ಒಂದು ಪ್ರಖ್ಯಾತ ಅಂತರರಾಷ್ಟ್ರೀಯ ಆರ್ಥಿಕ ಸೇವಾಸಂಸ್ಥೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮದುವೆ-ಮಕ್ಕಳು-ಸಾಂಸಾರಿಕ ಆದ್ಯತೆಗಳನ್ನು ಪರಿಗಣಿಸಿ, ಆ ಉದ್ಯೋಗಕ್ಕೆ ವಿದಾಯ ಹೇಳಿ, ತಮ್ಮ ಆಸಕ್ತಿಯ Healing ಕಾರ್ಯಕ್ಷೇತ್ರದಲ್ಲಿ ತಮ್ಮನ್ನು ತೀವ್ರತರವಾಗಿ ತೊಡಗಿಸಿಕೊಂಡರು. ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗಲೂ ಜೊತೆಯಲ್ಲಿದ್ದ Healing ಕ್ಷೇತ್ರದಲ್ಲಿನ ಆಸಕ್ತಿ ಕ್ರಮೇಣದಲ್ಲಿ ಅವರ ಜೀವನದ ಮೂಲ ಧ್ಯೇಯವೇ ಆಯಿತು. Healing ವಿಷಯಗಳ ಬಗ್ಗೆ ತಮ್ಮ ಓದನ್ನು ವಿಸ್ತಾರ ಮಾಡಿಕೊಂಡು ಹೊಸ ಜಾಡನ್ನು ಹಿಡಿದರು. ಮೂರ್ನಾಲ್ಕು ತರಹದ ವಿಭಾಗಗಳ ಸಮ್ಮಿಲನವೇ ಅವರ ವಿಶಿಷ್ಟ ಸೇವಾ ಪ್ರಕಾರವಾಯಿತು. ಹೀಗೆ ಕಲಾಶ್ರೀ ಅವರು ಕಾರ್ಪೊರೇಟ್ ಜಗತ್ತು ಮತ್ತು ಎನರ್ಜಿ ಹೀಲಿಂಗ್ ವಿಷಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಖ್ಯಾತರಾಗಿದ್ದು, ವಿಶ್ವದಾದ್ಯಂತ ಸಾವಿರಾರು ಮಂದಿಗೆ ಸಂಕಷ್ಟದಿಂದ ಹೊರಬರಲು ನೆರವಾಗಿದ್ದಾರೆ.
ಕಲಾಶ್ರೀ ಅವರ ಓದು ಮತ್ತು ಅನುಭವಗಳ ಆಳ-ಅಗಲ ಹೆಚ್ಚಾಗುತ್ತ ಹೋದಂತೆ ಅವರಲ್ಲಿ ಸಹಾಯ ಕೇಳುವವರ ಜನರ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ದಾಂಪತ್ಯ ವಿರಹ, ಸಂಸಾರ ಕಲಹ, ಅರೋಗ್ಯ ವಿಚಾರ, ಬಂಜೆತನ, ವ್ಯವಹಾರ, ಉದ್ಯೋಗ, ಮಾನಸಿಕ ತುಮುಲ... ಹೀಗೆ ಅವರಿಗೆ ಜನರಿಂದ ಬರುವ ಕರೆಗಳು ಎಲ್ಲ ತರಹದ್ದೂ ಆಗಿರುತ್ತದೆ. ಪ್ರತೀ ವಿಷಯವನ್ನೂ ಕೂಲಂಕಷವಾಗಿ ಪರಿಶೀಲಿಸಿ, ಅಧ್ಯಯನ ಮಾಡಿ ಅವರಿಗೆ ಪರಿಹಾರ ಕಲ್ಪಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ನೂರಾರು ಜನಕ್ಕೆ ಮತ್ತು ಕೋವಿಡ್ ಸಮಯದಲ್ಲಿ ಬಂದ ಸಾವಿರಾರು ಕೋರಿಕೆಗಳನ್ನು ಹೀಲಿಂಗ್ ಮುಖಾಂತರ ಒಳ್ಳೆಯ ಫಲಿತಾಂಶದೊಂದಿಗೆ ನಿರ್ವಹಿಸಿದ್ದಾರೆ. ಇವರು ನಡೆಸಿದ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ womb ಹೀಲಿಂಗ್ ಕಾರ್ಯಾಗಾರದಲ್ಲಿ ಪಾಲ್ಗೊಂಡು ಲಾಭ ಪಡೆದ ಅನೇಕ ಮಹಿಳೆಯರಿದ್ದಾರೆ. ನಾಡಿನ ಹಲವಾರು ಪ್ರಸಿದ್ಧ ಸಂಗೀತಗಾರರು, ಕಾರ್ಪೊರೇಟ್ ನಾಯಕರು, ಪ್ರಾಧ್ಯಾಪಕರು ಮತ್ತು ಅಭಿಯಂತರು ಕಲಾಶ್ರೀ ಅವರ ಮಾರ್ಗದರ್ಶನದಲ್ಲಿ ಲಾಭ ಪಡೆದವರಲ್ಲಿ ಸೇರಿದ್ದಾರೆ.
ನಮ್ಮ ನಡುವಿನ ವಿಶಿಷ್ಟ ಸಾಧಕಿ ಕಲಾಶ್ರೀ ಆನಂದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to popular Reiki healer and transformation coach Kalashree Anand 🌷🌷🌷
ಕಾಮೆಂಟ್ಗಳು