ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವಕರ್ಮ


ವಿಶ್ವಕರ್ಮ

On Vishwakarma Jayanthi 


ಸಂಸ್ಕೃತದಲ್ಲಿ ವಿಶ್ವಕರ್ಮ ಎಂದರೆ ಎಲ್ಲವನ್ನು ಸಾಧಿಸುವವನು, ಎಲ್ಲದರ  ಕರ್ತೃ, ಎಲ್ಲವನ್ನು ಮಾಡುವವನು. ಸೃಷ್ಟಿಯ ವ್ಯಕ್ತೀಕರಣ ಮತ್ತು ಋಗ್ವೇದದ  ಪ್ರಕಾರ ವಿಶ್ವಕರ್ಮ ಸೃಷ್ಟಿ ದೇವತೆಯ ಅಮೂರ್ತ ರೂಪ.  ಈತ ಅಭಿಯಂತರರ, ಕುಶಲಕರ್ಮಿಗಳ ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವತೆಯಾಗಿದ್ದಾನೆ. ಇವನು "ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ"  ಮತ್ತು ಬ್ರಹ್ಮನ್ ಹಾಗೂ ಪುರುಷರ ಮೂಲ ಪರಿಕಲ್ಪನೆ ಎಂದು ನಂಬಲಾಗಿದೆ.

ವಿಶ್ವಕರ್ಮ ದೇವತೆಗಳ ನಗರವನ್ನು, ಎಲ್ಲ ಭವನಗಳನ್ನು,  ರಥಗಳನ್ನು ಮತ್ತು ಇಂದ್ರನ ವಜ್ರಯುಧ ಸೇರಿದಂತೆ ಆಯುಧಗಳನ್ನು ರೂಪಿಸಿದನು. ದಂತಕಥೆಯ ಪ್ರಕಾರ, ಸೂರ್ಯನ ಶಕ್ತಿಯಿಂದ ಸಂಜನಾ ತನ್ನ ಮನೆಯಿಂದ ಹೊರಬಂದಾಗ, ವಿಶ್ವಕರ್ಮ ಶಕ್ತಿಯನ್ನು ಕಡಿಮೆ ಮಾಡಿ ಅದನ್ನು ಬಳಸಿಕೊಂಡು ಹಲವಾರು ಇತರ ಆಯುಧಗಳನ್ನು ರಚಿಸಿದನು. ರಾಮಾಯಣದ ಮಹಾಕಾವ್ಯದ ಪ್ರಕಾರ, ವನಾರ ವಿಶ್ವಕರ್ಮನ ಮಗನಾಗಿದ್ದು, ರಾಮನಿಗೆ ಸಹಾಯ ಮಾಡುತ್ತಾನೆ.  ಲಂಕೆ,  ಹಸ್ತಿನಾಪುರದಂತಹ ನಗರಗಳ ವೈಭವ ವರ್ಣಿಸುವಾಗ ಸಹ ವಿಶ್ವಕರ್ಮನ ಚಮತ್ಕಾರದ ಹೊಗಳಿಕೆ ಕಾಣಬರುತ್ತದೆ.

ವೈದಿಕ ವಿಶ್ವಕರ್ಮ ಎಂಬ ಪದವು ಇಂದ್ರ, ಸೂರ್ಯ, ಮತ್ತು ಅಗ್ನಿಯರ ಗುಣವಾಚಕವಾಗಿ ಕಾಣಿಸಿಕೊಂಡಿತು. ವೈದಿಕ ಯುಗದ ಕೊನೆಯ ಹಂತದಲ್ಲಿ ಮತ್ತು ಏಕೀಶ್ವರವಾದದ ಬೆಳವಣಿಗೆಯ ಅವಧಿಯಲ್ಲಿ, ದೇವರ ಪರಿಕಲ್ಪನೆ ಹೆಚ್ಚು ಅಮೂರ್ತವಾಯಿತು ಮತ್ತು (ಅಗೋಚರ ಸೃಷ್ಟಿ ಶಕ್ತಿಯಾದ) ವಿಶ್ವಕರ್ಮನು ಪರಬ್ರಹ್ಮನಾಗಿ ಹೊರಹೊಮ್ಮಿದನು. ವಾಚಸ್ಪತಿಯಂತಹ ಇವನ ಗುಣಲಕ್ಷಣಗಳು ಇವನನ್ನು (ದೇವತೆಗಳ ಗುರು) ಬೃಹಸ್ಪತಿಯೊಂದಿಗೆ ಸಂಬಂಧಿಸುತ್ತವೆ.  ಯಜುರ್ವೇದವು  ಇವನನ್ನು ಪ್ರಜಾಪತಿಯಾಗಿ  ಚಿತ್ರಿಸಿತು ಮತ್ತು ಅಥರ್ವವೇದದಲ್ಲಿ ಇವನನ್ನು  ಪಶುಪತಿ ಎಂದು ಉಲ್ಲೇಖಿಸಲಾಗಿದೆ.

ಶ್ವೇತಾಶ್ವತರೋಪನಿಷತ್ತು ಇವನನ್ನು ರುದ್ರಶಿವನೆಂದು ವರ್ಣಿಸಿತು, ಅಂದರೆ ಎಲ್ಲ ಜೀವಿಗಳಲ್ಲಿ ವಾಸಿಸುವವನು.

ಮೂಲಸ್ತಂಭ ಪುರಾಣದ ಒಂದು ಸೂಕ್ತದ ಪ್ರಕಾರ, ಭೂಮಿ, ಜಲ, ಬೆಳಕು, ಗಾಳಿ ಮತ್ತು ಆಕಾಶ, ತ್ರಿಮೂರ್ತಿಗಳು ಯಾವುದೂ ಇಲ್ಲದಿದ್ದಾಗ ಇವನು ತನ್ನನ್ನು ತನ್ನಿಂದಲೇ ಸೃಷ್ಟಿಸಿಕೊಂಡನು. ನಂತರ, ವೈದಿಕೋತ್ತರ ಮತ್ತು ಬ್ರಹ್ಮಣಗಳ ಅವಧಿಯಲ್ಲಿ, ವಿಶ್ವಕರ್ಮ ಪದವು ಋಷಿ ಮತ್ತು ಶಿಲ್ಪಿಯಾಗಿ ಕಾಣಿಸಿಕೊಂಡಿತು. ಯಜುರ್ವೇದದಲ್ಲಿ ಈ ಪದವು ಪಂಚಋಷಿಗಳ ಹೆಸರುಗಳಲ್ಲಿ ಒಂದಾಗಿ ಕಾಣಲಾಗುತ್ತದೆ. ಈ  ಪದವು  ಸೂರ್ಯನಾರಾಯಣನ  ಗುಣವಾಚಕವಾಗಿದೆಯಾದರೂ, ಸೂರ್ಯನ ಏಳು ಕಿರಣಗಳಲ್ಲಿ ಒಂದಕ್ಕೆ ವಿಶ್ವಕರ್ಮನೆಂದು ಕರೆಯಲಾಗುತ್ತದೆ. 

ಭೌವನ ವಿಶ್ವಕರ್ಮನು (ಅಥರ್ವ/ಆಂಗಿರಸ ಗೋತ್ರ) ಒಬ್ಬ ವೈದಿಕ ಋಷಿ ಮತ್ತು  ಋಗ್ವೇದದ  ಸೂಕ್ತದ ಲೇಖಕನಾಗಿದ್ದನು. ಇವನು   ಶಿಲ್ಪಿಯಾಗಿದ್ದನು ಮತ್ತು ಪೌರಾಣಿಕವಾದ ಅಷ್ಟಮ ವಸುಗಳಲ್ಲಿ ಎಂಟನೇ ಸಂನ್ಯಾಸಿ ಪ್ರಭಾಸನ ಮಗನಾಗಿದ್ದನು. ಇವನು ಸ್ಥಾಪತ್ಯ ವೇದ / ವಾಸ್ತು ಶಾಸ್ತ್ರ ಅಥವಾ ನಾಲ್ಕನೇ ಉಪವೇದವನ್ನು ಬಹಿರಂಗಗೊಳಿಸಿದನು  ಮತ್ತು ಅರವತ್ತುನಾಲ್ಕು ಕಲೆಗಳ ಅಧಿಪತಿಯಾಗಿದ್ದನು ಎಂಬ ಮಾತುಗಳಿವೆ.

ಪ್ರಾಣ ಮನಸ್ಸು ಸರ್ವೇಂದ್ರಿಯಗಳು ಆಕಾಶಾದಿ ಪಂಚ ಮಹಾಭೂತಗಳು ಶಿವ ಬ್ರಹ್ಮ ಹರಿ ಇಂದ್ರ ಸೂರ್ಯಾದಿ ಸಮಸ್ತ ದೇವತೆಗಳು ದ್ವಾದಶಾದಿತ್ಯ ಏಕಾದಶ ರುದ್ರರು ಸರ್ವ ಋಷಿಗಳು ಮನುಷ್ಯಾದಿ ಸಕಲ ಪ್ರಾಣಿಗಳು ವಿಶ್ವಕರ್ಮನಿಂದಲೆ ಉತ್ಪತ್ತಿಯಾಗಿ ಆತನಿಂದ ಪ್ರವರ್ಧಮಾನಗೊಂಡು ಕೊನೆಗೆ ಆತನಲ್ಲಿಯೆ ಲೀನವಾಗುತ್ತದೆ ಎಂದು ಹೇಳಲಾಗಿದೆ.

ವಿಶ್ವಕರ್ಮ ಅಥವಾ ವಿಶ್ವಕರ್ಮನ್, ಒಬ್ಬ ಸಮಕಾಲೀನ ಹಿಂದೂ ಧರ್ಮದಲ್ಲಿ ಕುಶಲಕರ್ಮಿ ಮತ್ತು ದೈವಿಕ ವಾಸ್ತುಶಿಲ್ಪಿ ದೇವರು. ವಿಶ್ವಕರ್ಮ ಎಂಬ ಪದವನ್ನು ಮೂಲತಃ ಯಾವುದೇ ಶಕ್ತಿಯುತ ದೇವತೆಗೆ ಒಂದು ಹೆಸರಾಗಿ ಬಳಸಲಾಗುತ್ತದೆ. ನಂತರದ ಅನೇಕ ಸಂಪ್ರದಾಯಗಳಲ್ಲಿ, ವಿಶ್ವಕರ್ಮ ಕುಶಲಕರ್ಮಿ ದೇವರ ಹೆಸರಾಯಿತು. ರಾಕ್ಷಸರಿಗೆ ಮಯ ಹೇಗೋ ಹಾಗೆ ದೇವತೆಗಳಿಗೆ ವಿಶ್ವಕರ್ಮ ಶಿಲ್ಪಿಯಾಗಿದ್ದನೆಂಬ ಉಲ್ಲೇಖಗಳು ಬಹಳಷ್ಟಿವೆ. ವಿಶ್ವಕರ್ಮ ಎಂಬ ಮಾತಿಗೆ ಕಾಲ ಕ್ರಮೇಣ ಬಡಗಿ ಎಂಬ ಸಾಮಾನ್ಯಾರ್ಥ ಬಂದಿತಲ್ಲದೆ ಇಂದಿನ ಬಡಗಿಗಳು ವಿಶ್ವಕರ್ಮನ ವಂಶಸ್ಥರೆಂದು ಹೇಳುವುದಿದೆ.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ