ಸಂಚಾರಿ ವಿಜಯ್
ಸಂಚಾರಿ ವಿಜಯ್ ಇನ್ನಿಲ್ಲ
ಇಹಲೋಕದ ಸಂಚಾರ ಮುಗಿಸಿದ ವಿಜಯ್, ಜೂನ್ 12ರಂದು ನಡೆದ ಅಪಘಾತದ ದೆಸೆಯಿಂದ ಇಂದು (15.06.2021ರಂದು) ಮುಂಜಾನೆ ನಿಧನರಾಗಿದ್ದಾರೆ.
ಬಿ. ವಿಜಯ್ ಕುಮಾರ್ 1983ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಜನಿಸಿದರು.
ಸಂಚಾರಿ ರಂಗತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾದ ವಿಜಯ್ 2011ರಲ್ಲಿ ತೆರೆಕಂಡ 'ರಂಗಪ್ಪ ಹೊಗ್ಬಿಟ್ನಾ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದರು.
'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದರು.
ದಾಸವಾಳ, ರಾಮ ರಾಮ ರಘು ರಾಮ, ಹರಿವು, ಒಗ್ಗರಣೆ, ಕಿಲ್ಲಿಂಗ್ ವೀರಪ್ಪನ್, ಸಿನಿಮಾ ಮೈ ಡಾರ್ಲಿಂಗ್, ಸಿಪಾಯಿ, ರಿಕ್ತ, ಅಲ್ಲಮ, ಮಾರಿಕೊಂಡವರು, ನನ್ ಮಗಳೇ ಹೀರೋಯಿನ್, ಅವ್ಯಕ್ತ, ವರ್ತಮಾನ, ಕೃಷ್ಣ ತುಳಸಿ, ಪಾದರಸ, ನಾತಿಚರಾಮಿ, ಆಡುವ ಗೊಂಬೆ, ಜಂಟಲ್ಮ್ಯಾನ್, ಆಕ್ಟ್ 1978 ಮುಂತಾದವು ವಿಜಯ್ ಅವರ ಇದುವರೆಗೆ ಬಿಡುಗಡೆಯಾಗಿರುವ ಇತರ ಚಿತ್ರಗಳಲ್ಲಿ ಸೇರಿವೆ. ಅವರು ಇತರ ಭಾಷೆಗಳ ಚಿತ್ರರಂಗದಲ್ಲೂ ಕೆಲಸ ಮಾಡುತ್ತಿದ್ದರು.
ನಟನಾಗಿದ್ದರೂ ಕೊರೊನಾ ಪೀಡಿತರಿಗಾಗಿ ಸಹಾಯ ಮಾಡುತ್ತಾ ಕೆಲಸ ಮಾಡುತ್ತಿದ್ದರು. ಸಾವಿನಲ್ಲೂ ಅವರ ಅಂಗಾಂಗಳ ದಾನಕ್ಕೆ ಏರ್ಪಾಡಾಗಿದೆ
ಇಷ್ಟು ಸಣ್ಣ ವಯಸ್ಸು ಇನ್ನೂ ನಾವು ಅವರ ಹೆಚ್ಚಿನ ಸಾಧನೆ ಕಾಣಬಹುದು ಎಂದುಕೊಂಡಿದ್ದಾಗ ಹೀಗೆ ಸಂಚಾರ ಮುಗಿಸಿಬಿಟ್ಟರು ಈ ವಿಜಯ್.
Respects to the one who cut short his journey Sanchari Vijay
ಕಾಮೆಂಟ್ಗಳು