ಉಪಾಕರ್ಮ
ಉಪಾಕರ್ಮ
ಉಪಾಕರ್ಮದ ಅರ್ಥ ವಿಧಿವತ್ತಾಗಿ ವೇದವನ್ನು ಅಧ್ಯಯನ ಮಾಡಲು ಪ್ರಾರಂಭಿಸುವುದು.
ಉಪನಯನಾನಂತರದಲ್ಲಿ ಮೊಟ್ಟ ಮೊದಲು ವೇದಾಧ್ಯಯನಕ್ಕೆ ಪ್ರಾರಂಭಿಸುವುದು ಪ್ರಥಮೋಪಾಕರ್ಮ. ಅಧ್ಯಯನ ಮಾಡಲು ಪ್ರಾರಂಭಿಸುವುದಕ್ಕೆ ಮೊದಲು ಹೋಮಮಾಡಿ ಆ ಅಗ್ನಿ ಸನ್ನಿಧಿಯಲ್ಲಿ ವೇದಾಧ್ಯಯನಕ್ಕೆ ಉಪಕ್ರಮಿಸಬೇಕು. ಪ್ರತಿವರ್ಷದಲ್ಲೂ ಶ್ರಾವಣ ಮಾಸದ ಹುಣ್ಣಿಮೆಯಲ್ಲಿ ಯಜುರ್ವೇದಿಗಳೂ ಇದೇ ತಿಂಗಳಿನ ಶ್ರವಣನಕ್ಷತ್ರದಲ್ಲಿ ಋಗ್ವೇದಿಗಳೂ ಹುಣ್ಣಿಮೆಯಲ್ಲೇ ಅಥರ್ವಣವೇದಿಗಳೂ ಉಪಾಕರ್ಮ ಮಾಡುವುದು ರೂಡಿಯಲ್ಲಿದೆ.
ಉಪಾಕರ್ಮಾನಂತರ ಐದು ತಿಂಗಳಕಾಲ ಶುಕ್ಲಪಕ್ಷದ ದಿವಸಗಳಲ್ಲಿ ವೇದಾಧ್ಯಯನವನ್ನೂ ಕೃಷ್ಣಪಕ್ಷದ ದಿವಸಗಳಲ್ಲಿ ಶಾಸ್ತ್ರಾಧ್ಯಯನವನ್ನೂ ಮಾಡಬೇಕು. ಶ್ರಾವಣದಲ್ಲಿ ಪ್ರಾರಂಭಿಸುವ ವೇದಾಧ್ಯಯನವನ್ನು ಪುಷ್ಯಮಾಸ ಶುಕ್ಲಪಕ್ಷದಲ್ಲಿ ಮುಕ್ತಾಯ ಮಾಡಬೇಕು. ಈ ಮುಕ್ತಾಯಕ್ಕೆ ಉತ್ಸರ್ಜನ ಎಂದು ಹೆಸರು. ಉತ್ಸರ್ಜನಾನಂತರ ಮತ್ತೆ ಶ್ರಾವಣದಲ್ಲಿ ಅಧ್ಯಯನವನ್ನು ಪ್ರಾರಂಭಿಸುವುದು ನಿತ್ಯೋಪಾಕರ್ಮ. ಇದಕ್ಕೆ ಗುರು ಶುಕ್ರಾಸ್ತಾದಿದೋಷಗಳಿಲ್ಲ. ಈ ಸಮಾರಂಭವನ್ನು ಜನಿವಾರದ ಹಬ್ಬ ಎಂದು ಕರೆಯುವುದೂ ರೂಢಿಯಲ್ಲಿದೆ.
Upakarma
ಕಾಮೆಂಟ್ಗಳು