ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಂಕಜ್ ಧೀರ್


 ಪಂಕಜ್ ಧೀರ್


ಪಂಕಜ್ ಧೀರ್ ಅಂದರೆ ಮೊದಲು ನೆನಪಾಗುವುದು ಆತ ಮಹಾಭಾರತದ ಟಿವಿ ಸರಣಿಯಲ್ಲಿ ನಿರ್ವಹಿಸಿದ ಕರ್ಣನ ಪಾತ್ರ.

ಪಂಕಜ್ ಧೀರ್ 1959ರ ನವೆಂಬರ್ 9ರಂದು ಪಂಜಾಬ್ನಲ್ಲಿ ಜನಿಸಿದರು.

ಪಂಕಜ್ ಧೀರ್ ಮಹಾಭಾರತದ ಸರಣಿಯಲ್ಲಿನ ಕರ್ಣನ ಪಾತ್ರವೇ ಅಲ್ಲದೆ ಅನೇಕ ಚಲನಚಿತ್ರಗಳಲ್ಲಿ; ಚಂದ್ರಕಾಂತ, ದ ಗ್ರೇಟ್ ಮಾರಾಠ, ಯುಗ್,  ಬಧೋ ಬಹು ಸೇರಿದಂತೆ ಅನೇಕ ಪ್ರಸಿದ್ಧ ದಾರಾವಾಹಿಗಳಲ್ಲಿ ನಟಿಸುತ್ತಾ ಬಂದಿದ್ದಾರೆ.  ಕನ್ನಡದಲ್ಲಿ 'ಅಪ್ಪಾಜಿ' ಎಂಬ ವಿಷ್ಣುವರ್ಧನ್ ನಾಯಕತ್ವದ ಚಿತ್ರದಲ್ಲೂ ಮುಖ್ಯಪಾತ್ರವೊಂದರಲ್ಲಿ ಭವ್ಯವಾಗಿ ನಟಿಸಿದ್ದರು.

ಎಲ್ಲಕ್ಕೂ ಮಿಗಿಲಾಗಿ ಪಂಕಜ್ ಧೀರ್ ಅವರ ಕರ್ಣನ ಪಾತ್ರ ನಿರ್ವಹಣೆ ಮುಖ್ಯವಾದದ್ದು. ಮಹಾಭಾರತದಲ್ಲಿನ ಕರ್ಣ ಪಾತ್ರ ಒಂದು ರೀತಿಯಲ್ಲಿ ಹೇಳಬಹುದಾದರೆ ವಿಶ್ವಕಥಾಲೋಕದಲ್ಲಿನ ಒಂದು ಅದ್ಭುತ ಸೃಷ್ಟಿ.  ಆ ಪಾತ್ರದಲ್ಲಿ ನವರಸ ಭಾವಗಳೂ ತುಂಬಿ ತುಳುಕಿವೆ ಅನಿಸುತ್ತೆ.  ರಂಗದಮೇಲೆ ಮತ್ತು ಸಿನಿಮಾ ಲೋಕದಲ್ಲಿ ಈ ಪಾತ್ರವನ್ನು ಅನೇಕ ಶ್ರೇಷ್ಠ ಕಲಾವಿದರು ಉತ್ತಮವಾಗಿ ಅಭಿವ್ಯಕ್ತಿಸಿದ್ದಾರೆ.  ಅನೇಕ ಶ್ರೇಷ್ಠ ಸಾಹಿತಿಗಳು, ಆ ಪಾತ್ರವನ್ನೇ ಪ್ರಧಾನವಾಗಿಸಿ ಕಥೆ, ಕಾದಂಬರಿ, ನಾಟಕ ಮತ್ತು ಕಾವ್ಯ ಮೂಡಿಸಿದ್ದಾರೆ. ಹೀಗೆ ಕರ್ಣನ ಪಾತ್ರ ಯಾವುದೇ ಕಲಾವಿದನಿಗಾದರೂ ಅಭಿನಯಿಸಲು ಭಾಗ್ಯ ಎಂಬಂತಹ ಸದವಕಾಶ.

ಪಂಕಜ್ ಧೀರ್ ಅವರಿಗೆ ಕರ್ಣನ ಪಾತ್ರವನ್ನು ಸುದೀರ್ಘ ಅವಧಿಯ ಕಾಲದವರೆಗೆ ಬಿ. ಆರ್. ಛೋಪ್ರಾ ಅಂತಹ ಸಮರ್ಥರ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ದೊರಕಿತು.  ಆತನಂತೂ ಬಹುಶಃ ಆ ಪಾತ್ರಕ್ಕಾಗಿಯೇ ಜನಿಸಿದ್ದಂತಹ ಅದ್ಭುತ ಅಭಿನಯ ನೀಡಿದರು.  ಅದರಲ್ಲೂ ಎಲ್ಲವೂ ಇದ್ದೂ ತಾನೊಬ್ಬ ಕುಬ್ಜ ಎಂಬ ಕರ್ಣನ ಸಹಜಭಾವವನ್ನು ಈತ ಸಮಸ್ತ ಧಾರಾವಾಹಿಯ ಎಲ್ಲ ಕಂತುಗಳಲ್ಲೂ ನಿರಂತರವಾಗಿ ಕಾಯ್ದುಕೊಂಡಿದ್ದರು.  ಒಂದು ರೀತಿಯಲ್ಲಿ ಹೇಳಬಹುದಾದರೆ ಆ ಧಾರವಾಹಿಯಲ್ಲಿನ ಅಭಿನಯದಲ್ಲಿ ಎಲ್ಲರಿಗಿಂತ ಮೊದಲು ನೆನಪಾಗುವ ಪಾತ್ರ ನಿರ್ವಹಣೆ ಇವರದ್ದು.  

ಪಂಕಜ್‍ ಧೀರ್ 'ಮೈ ಫಾದರ್ ಗಾಡ್ ಫಾದರ್. ಎಂಬ ಚಿತ್ರವನ್ನೂ ನಿರ್ದೇಶಿಸಿದ್ದರು. ಅವರು ಅಭಿನಯ್ ಆಕ್ಟಿಂಗ್ ಅಕಾಡೆಮಿ ಎಂಬ ಕಲಾಶಾಲೆಯನ್ನೂ ಹುಟ್ಟುಹಾಕಿದ್ದರು.  ಅನೇಕ ಚಲನಚಿತ್ರಗಳು ಮತ್ತು ಕಿರುತೆರೆಯ ಪಾತ್ರಗಳಲ್ಲಿ ಈಗಲೂ ಇದ್ದಾರೆ.  ಆದರೆ, ಕರ್ಣನಾಗಿಯೇ ಅವರು ಸದಾ ಜನಮನದ ಭಾವದಲ್ಲಿ ವಿರಾಜಮಾನರು. 

On the birthday actor Pankaj Dheer

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ