ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ ಬಹುಮುಖಿ ಬರಹಗಾರರಾಗಿ ಸಾಧನೆ ಮಾಡುತ್ತ ಸಾಗಿದ್ದಾರೆ.
ಸೆಪ್ಟೆಂಬರ್ 24 ಚಂದ್ರಪ್ರಭ ಕಠಾರಿ ಅವರ ಹುಟ್ಟುಹಬ್ಬ. ಬೆಂಗಳೂರಿನ ನ್ಯಾಶನಲ್ ಹೈಸ್ಕೂಲು, ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಕಾಲೇಜುಗಳಲ್ಲಿ ಇವರವಿದ್ಯಾಭ್ಯಾಸ ನೆರವೇರಿತು.
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆದ ಚಂದ್ರಪ್ರಭ ಕಠಾರಿ ಅವರಿಗೆ ಕತೆ, ಕವನ, ನಾಟಕಬರೆಯುವುದು ಹವ್ಯಾಸ. ಅವರ ಬರಹಗಳು ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡುಮೆಚ್ಚುಗೆ ಪಡೆಯುತ್ತ ಬಂದಿವೆ.
ಚಂದ್ರಪ್ರಭ ಕಠಾರಿ ಅವರ ಪ್ರಕಟಿತ ಕೃತಿಗಳಲ್ಲಿ ಕಠಾರಿ ಕತೆಗಳು, ಕಾಗೆ ಮೋಕ್ಷ ಎಂಬ ಕಥಾಸಂಕಲನಗಳು, ಅಂಬು ಎಂಬ ನಾಟಕ, (ಅ)ಗೋಚರ ಎಂಬ ಕವಿತಾ ಸಂಕಲನ ಸೇರಿವೆ.
ಚಂದ್ರಪ್ರಭ ಕಠಾರಿ ಅವರ ಬರಹಗಳು ಸಂಕ್ರಮಣ ಸಾಹಿತ್ಯ ಪತ್ರಿಕೆ, ಈ ಭಾನುವಾರ, ಕರ್ನಾಟಕಸಂಘ, ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೋಲ್ಮಿಂಚು, ಕಥಾ ಸರ್ಧೆಗಳಲ್ಲಿಬಹುಮಾನ ಪಡೆದಿವೆ.
ಚಂದ್ರಪ್ರಭ ಕಠಾರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Chadraprabha Katari

ಕಾಮೆಂಟ್ಗಳು