ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸುಮತಿ ಉಡುಪ


 ವಸುಮತಿ ಉಡುಪ


ವಸುಮತಿ ಉಡುಪ ಕನ್ನಡದ ಸುಪ್ರಸಿದ್ಧ ಕಥೆಗಾರ್ತಿ.

ವಸುಮತಿ ಉಡುಪ 1948ರ ಏಪ್ರಿಲ್ 18ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬಲ್ಲಿ ಜನಿಸಿದರು. ಅವರ  ತಂದೆ ಕಿರಣಗೆರೆ ರಂಗಾಭಟ್ಟರು.  ತಾಯಿ ತ್ರಿಪುರಾಂಬ. ತೀರ್ಥಹಳ್ಳಿಯಲ್ಲಿ ಪಿ.ಯು.ಸಿ ವರೆಗೆ ಓದಿದ ವಸುಮತಿ ಉಡುಪರಿಗೆ ಕಂಕಣಬಲ ಕೂಡಿಬಂದಾಗ ಓದಿಗೆ ಮಂಗಳ ಹಾಡಬೇಕಾಗಿ ಬಂತು. 

ವಸುಮತಿ ಉಡುಪರು ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ.  ಕಾದಂಬರಿ, ಕಥಾಸಂಕಲನ, ಪ್ರಬಂಧ ಹೀಗೆ ವಿವಿಧ ರೀತಿಯ ಬರಹಗಳಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.   ಅವರು, ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು.  ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ. 

ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ, ಮನ್ವಂತರ, ಸಂಧಿಕಾಲ ಮುಂತಾದುವು ವಸುಮತಿ ಉಡುಪ ಅವರ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ, ಸಂಕ್ರಮಣ, ಅಂತರಂಗದ ಪಿಸುನುಡಿ, ಬದುಕು ಮಾಯೆಯ ಮಾಟ ಮುಂತಾದ ಅವರ 20ಕ್ಕೂ ಹೆಚ್ಚು ಕಥಾ ಸಂಕಲನಗಳು ಪ್ರಕಟಗೊಂಡಿವೆ.  ಇವರ  ಪ್ರಬಂಧ ಸಂಕಲನ ‘ಸೀತಾಳದಂಡೆ’.  

ವಸುಮತಿ ಉಡುಪ ಅವರ ಅನೇಕ ಕೆಥೆಗಳು ಹಿಂದಿ, ತೆಲುಗು ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು ಜನಪ್ರಿಯವಾಗಿವೆ.   ಇವರ ಬರಹಗಳು ದೂರದರ್ಶನದಲ್ಲಿ ಮೂಡಿಬಂದಿವೆಯಲ್ಲದೆ, 'ಮೃಗತೃಷ್ಣ' ಮತ್ತು ಇನ್ನಿತರ ಕಥೆಗಳು ನಾಟಕಗಳಾಗಿ ಸಹಾ ಪರಿವರ್ತನಗೊಂಡಿವೆ. 

ವಸುಮತಿ ಉಡುಪರಿಗೆ  ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ, ಮುಂಬೈ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಕಥಾರಂಗ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ  ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. 

ವಸುಮತಿ ಉಡುಪರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.

ವಸುಮತಿ ಉಡುಪ
On the birth day of novelist Vasumathi Udupa 

ವಸುಮತಿ ಉಡುಪ ಕನ್ನಡದ ಸುಪ್ರಸಿದ್ಧ ಕಥೆಗಾರ್ತಿ.

ವಸುಮತಿ ಉಡುಪ 1948ರ ಏಪ್ರಿಲ್ 18ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬಲ್ಲಿ ಜನಿಸಿದರು. ಅವರ  ತಂದೆ ಕಿರಣಗೆರೆ ರಂಗಾಭಟ್ಟರು.  ತಾಯಿ ತ್ರಿಪುರಾಂಬ. ತೀರ್ಥಹಳ್ಳಿಯಲ್ಲಿ ಪಿ.ಯು.ಸಿ ವರೆಗೆ ಓದಿದ ವಸುಮತಿ ಉಡುಪರಿಗೆ ಕಂಕಣಬಲ ಕೂಡಿಬಂದಾಗ ಓದಿಗೆ ಮಂಗಳ ಹಾಡಬೇಕಾಗಿ ಬಂತು. 

ವಸುಮತಿ ಉಡುಪರು ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ.  ಕಾದಂಬರಿ, ಕಥಾಸಂಕಲನ, ಪ್ರಬಂಧ ಹೀಗೆ ವಿವಿಧ ರೀತಿಯ ಬರಹಗಳಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.   ಅವರು, ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು.  ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ. 

ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ, ಮನ್ವಂತರ, ಸಂಧಿಕಾಲ ಮುಂತಾದುವು ವಸುಮತಿ ಉಡುಪ ಅವರ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ, ಸಂಕ್ರಮಣ, ಅಂತರಂಗದ ಪಿಸುನುಡಿ, ಬದುಕು ಮಾಯೆಯ ಮಾಟ ಮುಂತಾದ ಅವರ 20ಕ್ಕೂ ಹೆಚ್ಚು ಕಥಾ ಸಂಕಲನಗಳು ಪ್ರಕಟಗೊಂಡಿವೆ.  ಇವರ  ಪ್ರಬಂಧ ಸಂಕಲನ ‘ಸೀತಾಳದಂಡೆ’.  

ವಸುಮತಿ ಉಡುಪ ಅವರ ಅನೇಕ ಕೆಥೆಗಳು ಹಿಂದಿ, ತೆಲುಗು ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು ಜನಪ್ರಿಯವಾಗಿವೆ.   ಇವರ ಬರಹಗಳು ದೂರದರ್ಶನದಲ್ಲಿ ಮೂಡಿಬಂದಿವೆಯಲ್ಲದೆ, 'ಮೃಗತೃಷ್ಣ' ಮತ್ತು ಇನ್ನಿತರ ಕಥೆಗಳು ನಾಟಕಗಳಾಗಿ ಸಹಾ ಪರಿವರ್ತನಗೊಂಡಿವೆ. 

ವಸುಮತಿ ಉಡುಪರಿಗೆ  ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ, ಮುಂಬೈ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಕಥಾರಂಗ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ  ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. 

ವಸುಮತಿ ಉಡುಪರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.

On the birth day of novelist Vasumathi Udupa 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ