ದ್ರೌಪದಿ ಮುರ್ಮು
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು ಅವರು 2022ರಿಂದ ಭಾರತದ 15ನೇ ಮತ್ತು ಪ್ರಸ್ತುತ ರಾಷ್ಟ್ರಪತಿಗಳಾಗಿ ಗೌರವಾನ್ವಿತರಾಗಿದ್ದಾರೆ.
ದ್ರೌಪದಿ ಮುರ್ಮು ಅವರು 1958ರ ಜೂನ್ 20ರಂದು ಒಡಿಶಾದ ರೈರಂಗ್ಪುರದ ಬೈದಪೋಸಿ ಪ್ರದೇಶದ ಉಪರಬೇಡ ಗ್ರಾಮದಲ್ಲಿ ಸಂತಾಲಿ ಜನಾಂಗದಲ್ಲಿ ಜನಿಸಿದರು. ಅವರ ತಂದೆ ಬಿರಂಚಿ ನಾರಾಯಣ ತುಡು ಕೃಷಿಕರಾಗಿದ್ದರು. ಅವರ ತಂದೆ ಮತ್ತು ಅಜ್ಜ ಗ್ರಾಮ ಪಂಚಾಯತ್ತಿನ ಸಾಂಪ್ರದಾಯಿಕ ಮುಖ್ಯಸ್ಥರಾಗಿದ್ದರು. ಅವರ ಮನೆಯವರು ಆಕೆಗೆ ಪುಟ್ಟಿ ತುಡು ಎಂದು ಹೆಸರಿಟ್ಟರು. ಶಾಲೆಯ ಶಿಕ್ಷಕಿ ಅವರಿಗೆ ದ್ರೌಪದಿ ಎಂದು ಮರುನಾಮಕರಣ ಮಾಡಿದ್ದರು.
ಮುರ್ಮು ಉಪರಬೇಡದ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಐದನೇ ವಯಸ್ಸಿನಲ್ಲಿ, ಮುಂದಿನ ಶಿಕ್ಷಣಕ್ಕಾಗಿ ಭುವನೇಶ್ವರಕ್ಕೆ ತೆರಳಿದರು. ಬಾಲಕಿಯರ ಪ್ರೌಢಶಾಲಾ ಘಟಕ-2 ರಿಂದ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಿ.ಎ. ಪದವಿಗೆ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಓದಿದರು. ಅವರು 1980ರಲ್ಲಿ ಬ್ಯಾಂಕರ್ ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮಗಳು ಇದ್ದರು. ಆಕೆಯ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಸಹೋದರ ಎಲ್ಲರೂ 2009 ರಿಂದ 2015 ರವರೆಗಿನ 7 ವರ್ಷಗಳ ಅವಧಿಯಲ್ಲಿ ನಿಧನರಾದರು. ಅವರು ಬ್ರಹ್ಮ ಕುಮಾರೀಸ್ ಆಧ್ಯಾತ್ಮಿಕ ಸಂಘಟನೆಯ ಅನುಯಾಯಿಯಾಗಿದ್ದಾರೆ.
1979 ರಿಂದ 1983 ರವರೆಗೆ ಮುರ್ಮು ಅವರು ಒಡಿಶಾ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದರು. 1994 ರಿಂದ 1997 ರವರೆಗೆ, ಅವರು ರೈರಂಗಪುರದ ಶಾಲೆಯಲ್ಲಿ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅಲ್ಲಿ ಅವರು ಹಿಂದಿ, ಒಡಿಯಾ, ಗಣಿತ ಮತ್ತು ಭೂಗೋಳವನ್ನು ಕಲಿಸಿದರು. ಅವರು ಶಾಲೆಯಲ್ಲಿ ಪೂರ್ಣ ಸಂಬಳವನ್ನು ಎಂದೋ ಕೇಳಲಿಲ್ಲ.
1997 ರಲ್ಲಿ, ದ್ರೌಪದಿ ಮುರ್ಮು ಮಹಿಳೆಯರಿಗೆ ಮೀಸಲಾದ ಸ್ಥಾನದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಯರಂಗಪುರ ನಗರ ಪಂಚಾಯತ್ನ ಕೌನ್ಸಿಲರ್ ಆಗಿ ಆಯ್ಕೆಯಾದರು. ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ದ್ರೌಪದಿ ಮುರ್ಮು ಅವರು 2000ದ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ರೈರಂಗ್ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದರು. 2000 ಮತ್ತು 2009 ರ ನಡುವೆ ಒಡಿಶಾ ವಿಧಾನಸಭೆಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರದ ಇದ್ದ ಅವಧಿಯಲ್ಲಿ, ಅವರು ವಾಣಿಜ್ಯ ಮತ್ತು ಸಾರಿಗೆಗಾಗಿ ಸ್ವತಂತ್ರ ಉಸ್ತುವಾರಿ ಹೊಂದಿದ್ದ ರಾಜ್ಯ ಸಚಿವರಾಗಿದ್ದರು.ಮುಂದೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಖಾತೆಯನ್ನೂ ನಿರ್ವಹಿಸಿದರು. 2007 ರಲ್ಲಿ, ಅವರು ಒಡಿಶಾ ವಿಧಾನಸಭೆಯ ಅತ್ಯುತ್ತಮ ಶಾಸಕರಿಗಾಗಿ ನೀಡುವ ನೀಲಕಂಠ ಪ್ರಶಸ್ತಿಯನ್ನು ಪಡೆದರು. 2009 ರಲ್ಲಿ, ಬಿಜೆಡಿ ಮತ್ತು ಬಿಜೆಪಿ ಮೈತ್ರಿ ಕೊನೆಗೊಂಡಿದ್ದರಿಂದ ಅವರು ಮಯೂರ್ಭಂಜ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸೋತರು. ಅವರು 2013ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ (ಎಸ್ಟಿ ಮೋರ್ಚಾ) ಗೆ ಆಯ್ಕೆಯಾದರು. 2015 ರವರೆಗೆ ಜಿಲ್ಲಾ ಅಧ್ಯಕ್ಷರಾಗಿದ್ದರು. ಅವರು 2015 ರಿಂದ 2021 ರವರೆಗೆ ಜಾರ್ಖಂಡ್ನ 8 ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. 21 ಜುಲೈ 2022 ರಂದು, ಮುರ್ಮು ಅವರು 2022 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಯುಕ್ತ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದರು. 26 ಜುಲೈ 2022 ರಂದು, ದ್ರೌಪದಿ ಮುರ್ಮು ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುರ್ಮು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಭಿಮಾನಿ. ಅವರು ಮಹಾತ್ಮಾ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಕುರಿತು ಸಹಾ ಅಪಾರ ಶ್ರದ್ಧೆ ಹೊಂದಿದ್ದಾರೆ.
ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆ.
Happy birthday to our honorable President of India, Smt Draupadi Murmu Madam 🌷🙏🌷
ಕಾಮೆಂಟ್ಗಳು