ಎನ್. ಸಿ . ರಘುರಾಮ್
ಎನ್. ಸಿ . ರಘುರಾಮ್
ಲೇಖಕರು: ವಿದ್ಯಾರಣ್ಯ ವೆಂಕಟರಮಣನ್
ದಿವಾನ್ ಸರ್ ಎಂ .ಎನ್. ಕೃಷ್ಣರಾಯರು ಎಲ್ಲರಿಗೂ ಚಿರ ಪರಿಚಿತರೆ. ಅವರ ಮಗಳು ಶ್ರೀಮತಿ ಪದ್ಮಮ್ಮ ಮತ್ತು ಅಳಿಯಂದಿರು ನ್ಯಾಯಾಧೀಶರೂ ಮತ್ತು ಸ್ವಾತಂತ್ರ ಹೋರಾಟಗಾರರೂ ಆಗಿದ್ದ ಶ್ರೀ ನಿಟ್ಟೂರು ಶ್ರೀನಿವಾಸರಾಯರು. ಅವರ ಮಗ ಶ್ರೀ ಎನ್ .ಎಸ್. ಚಂದ್ರಶೇಖರ ಮತ್ತು ಶ್ರೀಮತಿ ನಾಗಮಣಿ ಅವರ ಹಿರಿಯ ಪುತ್ರಿ ಶ್ರೀಮತಿ ಅನುಪಮಾ ಜಯಸಿಂಹ ಮತ್ತು ಅವರ ಮಗ ಶ್ರೀ ಎನ್. ಸಿ .ರಘುರಾಮ್.
ರಘುರಾಮ್ 18- 10 -1959ರಲ್ಲಿ ಬೆಂಗಳೂರಿನಲ್ಲಿ ಅವರ ತಾತನವರ ಮನೆ ಮಾಡಲ್ ಹೌಸ್ ಸ್ಟ್ರೀಟ್ ನಲ್ಲಿ ಜನಿಸಿದರು.
ರಘುರಾಮ್ ಮತ್ತು ಅವರ ಅಕ್ಕ ಅನುಪಮಾ ಇಬ್ಬರು ಅವಿಭಕ್ತ ಕುಟುಂಬದಲ್ಲಿ ಬೆಳೆದರು. ಅವರ ಚಿಕ್ಕಪ್ಪ ಶ್ರೀ ಎನ್ ಎಸ್ ಸುಬ್ಬಣ್ಣ ಮತ್ತು ಚಿಕ್ಕಮ್ಮ ಶ್ರೀಮತಿ ರೋಹಿಣಿ ಹಾಗೂ ಅಜ್ಜಿ ತಾತ ಎಲ್ಲರೂ ಸೌತ್ ಎಂಡ್ ನಲ್ಲಿ ಇರುವ ಮನೆಯಲ್ಲಿ ವಾಸವಾಗಿದ್ದರು. ಅವರ ತಾಯಿ ನಾಗಮಣಿ ಅವರ ತಂದೆ ಡಾ. ನರಸಿಂಹಯ್ಯ ಹಾಗೂ ತಾಯಿ, ಡಾ. ಆರ್ ಲಕ್ಷ್ಮೀದೇವಿ ಇವರಿಗೂ ಪ್ರೀತಿಯ ಮಗು ಆಗಿದ್ದರು. ಅಜ್ಜಿ ಪದ್ಮಮ್ಮನವರು ಪೂಜೆ ದೇವಸ್ಥಾನ ಎಲ್ಲ ಮುಗಿಸಿ ಮಗು ಬರುವವರೆಗೂ ಕಾಯುತ್ತಿದ್ದರು. ತಾತನವರಿಗೂ ಇವರು ಪ್ರೀತಿಯ ಮೊಮ್ಮಗ. ಸಾಂಸ್ಕೃತಿಕ ಮತ್ತು ಸಾಹಿತ್ಯದ ವಾತಾವರಣ ಮನೆಯಲ್ಲಿ ಇರುತ್ತಿತ್ತು. ತಾತನವರನ್ನು ನೋಡಲು ಹಲವಾರು ಗಣ್ಯ ವ್ಯಕ್ತಿಗಳು ಬರುತ್ತಿದ್ದರು. ಅವರ ಸಂಭಾಷಣೆ ಕೇಳಿಸಿಕೊಂಡು ಬೆಳೆದರು.
ಮೊದಲ ಶಾಲೆ ಬಾಪೂಜಿ ನಿಕೇತನ. ಮಾಡೆಲ್ ಹೌಸ್ ಸ್ಟೇಟ್ ನಲ್ಲಿ ಇದ್ದ ಆ ಶಾಲೆಗೆ ಅವರನ್ನು ನೋಡಿಕೊಳ್ಳುತ್ತಿದ್ದ ಶ್ರೀಮತಿ ಸರೋಜಾ ಅವರ ಜೊತೆಯಲ್ಲಿಯೇ ಹೋಗಿ, ತರಗತಿಯಲ್ಲಿಯೂ ಅವರ ಪಕ್ಕದಲ್ಲಿಯೇ ಕುಳಿತಿರುತ್ತಿದ್ದರು. ಈಗಲೂ ಶ್ರೀಮತಿ ಸರೋಜಾ ಅವರು ಆ ಕ್ಷಣಗಳನ್ನು ನೆನೆಸಿಕೊಳ್ಳುತ್ತಾರೆ. ಮುಂದೆ ಒಂದು ವರ್ಷ ಸಂಡೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು ಅನಂತರ ಬೆಂಗಳೂರಿನ ನೆಟ್ಟಕಲಪ್ಪ ವೃತ್ತದ ಬಳಿ ಇದ್ದ ಪ್ರತಿಭಾ ಬಾಲ ಮಂದಿರದಲ್ಲಿ ವಿದ್ಯಾಭ್ಯಾಸ ಮುಂದುವರೆಯಿತು. ಪ್ರೌಢ ಶಾಲೆಗೆ ನ್ಯಾಷನಲ್ ಹೈಸ್ಕೂಲ್ ಮತ್ತು ಪಿಯುಸಿ ಎರಡು ವರ್ಷ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದರು. ಅನಂತರ ಆರ್. ವಿ. ಇಂಜಿನಿಯರಿಂಗ್ ಹಾಗೂ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ವಿದ್ಯಾಭ್ಯಾಸ ಮುಗಿದ ತಕ್ಷಣ 1984ರಲ್ಲಿ ಬೆಂಗಳೂರಿನಲ್ಲಿರುವ ಪ್ರಸಿದ್ಧ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ಸಂಸ್ಥೆಯಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ 1996 ರವರೆಗೂ ಕೆಲಸ ಮಾಡಿದರು. ಬುದ್ಧಿವಂತಿಕೆ ಸಮಯಪ್ರಜ್ಞೆ ಮತ್ತು ಕೆಲಸದಲ್ಲಿ ಶ್ರದ್ಧೆ ಇವರಿಗೆ ಇರುವ ಅಸಾಮಾನ್ಯ ಗುಣಗಳು. ಸಮಯಕ್ಕೆ ಸರಿಯಾಗಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಸುವುದೇ ಅವರ ಧ್ಯೇಯವಾಗಿತ್ತು. ಆದ್ದರಿಂದ ಮುಂದೆಯೂ ಕೂಡ ಎಲ್ಲರ ಬಳಿ ಸೈಎನಿಸಿಕೊಳ್ಳುತ್ತಿದ್ದರು ಮತ್ತು ಪ್ರಶಸ್ತಿಗಳನ್ನು ದೊರಕಿಸಿ ಕೊಳ್ಳುತ್ತಿದ್ದರು. ಅಲ್ಲಿ ಹಲವು ಡಿಫೆನ್ಸ್ ಭಾಗಗಳನ್ನು ತಯಾರು ಮಾಡಲಾಗುತ್ತಿತ್ತು. 1994ರಲ್ಲಿ ಬಿಪಿಎಲ್ ರೆಫ್ರಿಜರೇಶನ್ ಡಿವಿಜನ್ ಗೆ ಸೀನಿಯರ್ ಮ್ಯಾನೇಜರ್ ಆಗಿ ಸೇರಿದರು. ಆ ಸಮಯಕ್ಕೆ ನಮ್ಮ ಅಕ್ಕನ ಮದುವೆ 18 -6 -1984 ರಲ್ಲಿ ನೆರವೇರಿತ್ತು. ನಮ್ಮ ಭಾವನವರು ಶ್ರೀ ಎನ್. ಸಿ. ರಘುರಾಮ್ ನನ್ನನ್ನು ಬಿಪಿಎಲ್ ನಲ್ಲಿ ಸ್ಟೋರ್ಸ್ ನಲ್ಲಿ ಕೆಲಸಕ್ಕೆ ಸೇರಿಸಿದರು. ಮೊದಲೇ ಹೇಳಿದಂತೆ ಕೆಲಸದಲ್ಲಿ ಮತ್ತು ಸಮಯ ಪಾಲನೆಯಲ್ಲಿ ಅಚ್ಚು ಕಟ್ಟು. ಇಲ್ಲಿ ನಾವೆಲ್ಲ ಅವರಿಂದ ಬಹಳ ಕೆಲಸ ಕಲಿತೆವು ಮತ್ತೆ ತುಂಬಾ ಪ್ರೋತ್ಸಾಹವನ್ನೂ ನೀಡುತ್ತಿದ್ದರು. ಅವರು ಅಲ್ಲಿ ಪ್ಲಾನಿಂಗ್ ಮತ್ತೆ ಸ್ಟೋರ್ಸ್ಗೆ ಮ್ಯಾನೇಜರ್ ಆಗಿದ್ದರು. ಯಾವ ಯಾವ ಮಾಡೆಲ್ ಯಾವಾಗ, ಯಾವಾಗ ಆಗಬೇಕು, ಎಷ್ಟು ಆಗಬೇಕು. ಬೆಲೆ ಎಷ್ಟಿರಬೇಕು ಬಿಡಿ ಭಾಗಗಳನ್ನು ಎಲ್ಲಿಂದ ತರಬೇಕು ,ಅದರ ಕ್ವಾಲಿಟಿ ಹೇಗಿರಬೇಕು ಎಂಬ ಮಾಹಿತಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಿ ಶಹಭಾಸ್ ಪಡೆಯುತ್ತಿದ್ದರು. ಎಲ್ಲಕ್ಕಿಂತ ದೊಡ್ಡ ವಿಷಯವೆಂದರೆ ಅವರಿಗಿರುವ ಅಪಾರವಾದ ಜ್ಞಾಪಕ ಶಕ್ತಿ ಮತ್ತು ವೇಗವಾಗಿ ಲೆಕ್ಕಾಚಾರ ಮಾಡುವ ಒಂದು ಜಾಣ್ಮೆ. ಹಳೆಯ ಸ್ನೇಹಿತರನ್ನು ಗುರುತಿಸಿ ಮಾತನಾಡಿಸುತ್ತಾರೆ, ಅದನ್ನು ಈಗಲೂ ಅವರ ಮನೆಯ ಬಳಿ ಇರುವ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ. ಅವರ ಸ್ನೇಹಿತರ ಬಳಗ ಬಹಳ ದೊಡ್ಡದು .ಈಗಲೂ ಅವರು ಪ್ರತಿ ದಿನ ಬಾಲ್ಯ ಸ್ನೇಹಿತರನ್ನು ಭೇಟಿ ಮಾಡಿ ಮತ್ತು ವಿಷಯ ವಿನಿಮಯ ಮಾಡಿಕೊಳ್ಳುತ್ತಾರೆ. ಇವರಿಗೆ ಸ್ಪೂರ್ತಿ ನೀಡಿರುವ ವ್ಯಕ್ತಿಗಳು ಇವರ ಸೋದರ ಮಾವಂದಿರಾದ ಪದ್ಮಭೂಷಣ ಪುರಸ್ಕೃತ ಡಾ. ಎನ್. ಶೇಷಗಿರಿಯವರು ಹಾಗೂ ಚಿಕ್ಕಪ್ಪ ಶ್ರೀ ಎನ್ .ಎಸ್. ಸುಬ್ಬಣ್ಣ ಅವರು.
1996 ರಿಂದ 99 ರವರೆಗೆ" ಕಿರ್ಲೋಸ್ಕರ್ ಟೊಯೋಡ ಟೆಕ್ಸ್ಟೈಲ್ ಮಷೀನರಿ ಲಿಮಿಟೆಡ್ "ನಲ್ಲಿ ಹೆಡ್ ಆಫ್ ಪ್ರೊಡಕ್ಷನ್ ಸಿಸ್ಟಮ್ಸ್ ನಲ್ಲಿ ಸೇವೆ ಸಲ್ಲಿಸಿದರು. ಆಗ ಅಲ್ಲಿ ERP ಇಂಪ್ಲಿಮೆಂಟೇಶನ್ ಕೂಡ ಆಯಿತು .ಅನಂತರ ಅವರು "ರಾಂಮ್ಕೋ
ಸಿಸ್ಟಮ್ ಲಿಮಿಟೆಡ್" ನಲ್ಲಿ ರೀಜನಲ್ ಹೆಡ್ ಆಗಿ 2001 ರವರೆಗೆ ಅಚ್ಚುಕಟ್ಟಾಗಿ ಕೆಲಸ ಮಾಡಿದರು. ಅನಂತರ 2001 ರಿಂದ 2004 ರ ವರೆಗೆ ಚೆನ್ನೈನಲ್ಲಿರುವ "ಆರ್ಕಿಡ್ ಕೆಮಿಕಲ್ಸ್ ಅಂಡ್ ಫಾರ್ಮೆಸ್ಟಿಕಲ್ಸ್ "ನಲ್ಲಿ ವೈಸ್ ಪ್ರೆಸಿಡೆಂಟ್- ಇನ್ಫರ್ಮೇಷನ್ ಟೆಕ್ನಾಲಜಿ ಆಗಿ ಸೇವೆ ಸಲ್ಲಿಸಿದರು. ಅನಂತರ "ಸ್ಪೆಕ್ಟ್ರ ಸಾಫ್ಟ ಟೆಕ್ನಾಲಜಿಸ್ ಲಿಮಿಟೆಡ್" ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅಲ್ಲಿ ಫೌಂಡರ್ CEO ಅಂಡ್ ಮೆಂಬರ್ ಆಫ್ ದ ಬೋರ್ಡ್ ಆಗಿದ್ದು ಕಾರ್ಯ ನಿರ್ವಹಿಸಿದರು. ಆ ಸಂಸ್ಥೆಯ ಮುಖ್ಯ ಉದ್ದೇಶ ಏನೆಂದರೆ, ಮಾಹಿತಿ ತಂತ್ರಜ್ಞಾನದಿಂದ ಔಷಧೀಯ ಪದಾರ್ಥಗಳಿಗೆ ಆಹಾರ ಸಂಸ್ಕರಣ ಪದಾರ್ಥಗಳಿಗೆ ಮತ್ತು ರಾಸಾಯನ ಪದಾರ್ಥಗಳಿಗೆ ಪರಿಹಾರವನ್ನು ನೀಡುವುದು. 2009ರಲ್ಲಿ ಸ್ವಂತವಾಗಿ ನಿಟ್ಟೂರು ಗ್ರೀನ್ ಫೀಡ್ಡ್ಸ ಪ್ರೈವೇಟ್ ಲಿಮಿಟೆಡ್ ಎಂಬ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು. ಈಗ ಇಂಡಿಪೆಂಡೆಂಟ್ ಬಿಸಿನೆಸ್ ಕನ್ಸಲ್ಟೆಂಟ್ ಆಗಿ ಅದಾನಿ ಗುಂಪಿಗೆ ಸೇರಿರುವ ಆಲ್ಫಾ ಡಿಸೈನ್ ನಲ್ಲಿ ಐಟಿ ಹೆಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಇವರಿಗೆ ಹಲವಾರು ಮಾರ್ಗದರ್ಶಕರಿದ್ದರು .ಅವರಲ್ಲಿ ಶ್ರೀ ಗೋಪಾಲಕೃಷ್ಣ, ಶ್ರೀಕೆ.ಎಂ .ಜಯಪ್ರಕಾಶ್ , ಶ್ರೀ ಬಸಪ್ಪ ಮತ್ತು ಶ್ರೀ ಕೃಷ್ಣನ್ ಇವರು ಮುಖ್ಯವಾದವರು.
ರಘುರಾಮ್ ಅವರು ಕಾರ್ಯ ನಿರ್ವಹಿಸಿದ ಸಂಸ್ಥೆಗಳಲ್ಲೆಲ್ಲ ಅನೇಕ ಪ್ರತಿಭಾವಂತ ತರುಣರನ್ನು ಗುರುತಿಸಿ ಅವರಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದರು, ತದ್ವಾರ ಹಲವರು ಈಗ ಬಹಳ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ . ಆರ್ಕಿಡ್ ನಲ್ಲಿ ಸಿಸ್ಟಮ್ಸ್ ಅಪ್ಲಿಕೇಶನ್ ಅಂಡ್ ಪ್ರಾಡಕ್ಟ್ಸ್ ಇನ್ ಡೇಟಾ ಪ್ರೊಸೆಸಿಂಗ್ (SAP) ಜಿ .ಎಂ. (ಐ ಟಿ) ಆಗಿದ್ದಾಗ ಮೊದಲನೆಯ ಸಿ ಐ ಓ ಎಲ್ ಪ್ರಶಸ್ತಿಯನ್ನು ಪಡೆದರು. ರಘುರಾಮ್ ಅವರು 25 ಬಾರಿ ರಕ್ತದಾನ ಮಾಡಿದ್ದಾರೆ. ಯಾವ ಸಮಯದಲ್ಲಿ ಆದರೂ ಅವರ ರಕ್ತದ ಗುಂಪಿನ ರೋಗಿಗೆ ರಕ್ತದ ಅವಶ್ಯಕತೆ ಇದೆ ಎಂದು ತಿಳಿದ ಕೂಡಲೇ ಅಲ್ಲಿಗೆ ಧಾವಿಸಿ ಸಹಾಯ ಮಾಡುತ್ತಿದ್ದರು.
ದೈಹಿಕ ವ್ಯಾಯಾಮ ಮತ್ತು ವಾಕಿಂಗ್ ಇವರ ದಿನಚರಿಯ ಮುಖ್ಯ ಭಾಗ. ಹತ್ತು ಕಿ.ಮಿ. Marathon ನಲ್ಲಯೂ ಭಾಗವಹಿಸಿದ್ದಾರೆ.
ಕ್ರಿಕೆಟ್ ಮತ್ತು ಇತರ ಕ್ರೀಡೆಗಳಲ್ಲಿ ಅವರಿಗೆ ಬಹಳ ಆಸಕ್ತಿ. ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಆಟ ಆಡುತ್ತಿದ್ದರು. ಕ್ರೀಡೆಗಳ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕರಾರು ವಾಕ್ಕಾಗಿ ನೆನಪಿಸಿಕೊಳ್ಳುವರು ಮತ್ತು ವಿಶ್ಲೇಷಣೆಗಳನ್ನು ಮುತುವರ್ಜಿಯಿಂದ ಮಾಡುತ್ತಾರೆ. ಪ್ರಚಲಿತ ಘಟನೆ, ಪ್ರಚಲಿತ ವಿದ್ಯಮಾನಗಳು ರಾಜ್ಯ
ದೇಶ ಮತ್ತು ವಿದೇಶಗಳಿಂದ ಮಾಹಿತಿ ಶೇಖರಣೆ ಮಾಡಿ ವಿಶ್ಲೇಷಿಸಿ ಜನರಿಗೆ ತಿಳಿಸುವುದು ಮತ್ತು ರಾಜ್ಯ ದೇಶಗಳಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳ ಬಗ್ಗೆ ವಿಶ್ಲೇಷಣೆಗಳನ್ನು ಫೇಸ್ ಬುಕ್ ನಲ್ಲಿ ಚರ್ಚಿಸುವುದು ಅವರ ಅಚ್ಚುಮೆಚ್ಚಿನ ಹವ್ಯಾಸ.
ಪ್ರಾಥಮಿಕ ಶಾಲೆಯನ್ನು ಕನ್ನಡ ಭಾಷೆಯಲ್ಲಿ ಕಲಿತಿದ್ದರೂ ಅವರು ಆಂಗ್ಲ ಭಾಷೆಯ ಮೇಲೆ ಬಹಳ ಹಿಡಿತವನ್ನು ಸಾಧಿಸಿದ್ದಾರೆ. ಆದ್ದರಿಂದ ಆಂಗ್ಲ ಭಾಷೆಯ ಪುಸ್ತಕಗಳನ್ನು ಓದುವುದು ಅವರಿಗೆ ಬಹಳ ಪ್ರಿಯವಾದ ಕೆಲಸ. ಅದಲ್ಲದೆ ಕನ್ನಡ ನಾಟಕಗಳು, ಕರ್ನಾಟಕ ಸಂಗೀತ ಲಘು ಸಂಗೀತ ಕೇಳುವುದು, ಚಲನಚಿತ್ರ ವೀಕ್ಷಣೆ ಕೂಡ ಇವರಿಗೆ ಬಹಳ ಇಷ್ಟವಾದ ಚಟುವಟಿಕೆ. ಹತ್ತು ಹಲವು ರಾಜ್ಯಗಳು ಮತ್ತು ಹೊರ ದೇಶಗಳನ್ನು ನೋಡಿ ಬಂದಿರುವುದು ಅಲ್ಲಿನ ಸಂಸ್ಕೃತಿಯನ್ನು ಅರಿತಿದ್ದಾರೆ.
ಹಕ್ಕಿಗಳು ಪ್ರಾಣಿಗಳು ಮತ್ತು ವನ್ಯ ಜೀವಿಗಳ ಬಗ್ಗೆ ಅಪಾರವಾದ ಆಸಕ್ತಿ ಮತ್ತು ಮೃಗ ಪಕ್ಷಿಗಳ ವಿವಿಧ ಪ್ರಭೇದಗಳನ್ನು ಕುರಿತು ಅವರು ತಿಳಿದುಕೊಂಡಿದ್ದಾರೆ. ಮರಗೆಲಸ ಹೊಲಿಗೆ ಇದರಲ್ಲೂ ಅವರು ನಿಪುಣರು. ಇದನ್ನು ಅವರು ನ್ಯಾಷನಲ್ ಹೈಸ್ಕೂಲಿನಲ್ಲಿ ಇದ್ದಾಗ ಕಲಿತರು. ರಘುರಾಮ್ ಅವರು ಚಿಕ್ಕ ಹುಡುಗನಾಗಿದ್ದಾಗ ಅವರ ಮನೆಗೆ ಹಲವಾರು ಮಹನೀಯರು ಮತ್ತು ಗಣ್ಯರು ಬರುತ್ತಿದ್ದರು ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ದೊರೆಯಿತು. ತಾತನವರ ಜೊತೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ಬರುತ್ತಿದ್ದರು. ಡಿವಿಜಿ ಪುತಿನ, ಮಾಸ್ತಿ, ಶಿವರಾಮ ಕಾರಂತರು, ಎ.ಎನ್. ಮೂರ್ತಿರಾಯರು ಮತ್ತು ಹಲವಾರು ವಿದ್ವಾಂಸರನ್ನು ರಾಜಕೀಯ ಗಣ್ಯರಾದ ಎಲ್ ಕೆ ಅಡ್ವಾನಿ, ದೇವೇಗೌಡರು, ಪ್ರಧಾನಿಗಳಾಗಿದ್ದ ಗುರ್ಝಾರಿಲಾಲ್ ನಂದ,ನ್ಯಾಯಮೂರ್ತಿಗಳಾದ ಶ್ರೀ ಎಮ್.ಎನ್ ವೆಂಕಟಾಚಲಯ್ಯ ಮುಂತಾದವರನ್ನು ನೋಡುವ ಭಾಗ್ಯ ದೊರೆಯಿತು. ಅಲ್ಲದೆ ಅವರ ತಾತ ಜಸ್ಟಿಸ್ ನಿಟ್ಟೂರು ಶ್ರೀನಿವಾಸ ರಾಯರು ಹಂಗಾಮಿ ರಾಜ್ಯ ಪಾಲರಾಗಿ ಅಧಿಕಾರ ವಹಿಸಿಕೊಂಡಾಗ ಕೆಲವು ಕಾಲ ರಾಜಭವನದಲ್ಲಿಯೂ ವಾಸವಾಗಿದ್ದರು. ತಾತನವರಿಗೆ ಬಡವ ಬಲಿದ ಎಂಬ ತಾರತಮ್ಯ ಇರಲಿಲ್ಲ, ಇವರು ಅದನ್ನೇ ಮೈಗೂಡಿಸಿಕೊಂಡಿದ್ದಾರೆ.
ಕಷ್ಟದಲ್ಲಿರುವವರಿಗೆ ಕೈಮೀರಿ ಸಹಾಯ ಮಾಡುತ್ತಾರೆ. ನಮ್ಮ ತಂದೆ ಶ್ರೀ ಡಿ ಆರ್ ವೆಂಕಟರಮಣನ್ ಹಾಗೂ ನನ್ನ ತಾಯಿ ಸರಸ್ವತಿ ಅವರಿಗೆ ಅಚ್ಚು ಮೆಚ್ಚಿನ ಅಳಿಯ ಆಗಿದ್ದರು ಯಾವುದೇ ಕಷ್ಟದ ಸಮಯದಲ್ಲಿ ಈಗಲೂ ಸಹಾಯ ಹಸ್ತ ನೀಡುತ್ತಾರೆ. ಚೆನ್ನೈನಲ್ಲಿ ಇದ್ದಾಗ ನನ್ನ ಅಕ್ಕ ರುಕ್ಮಿಣಿ ಅವರಿಗೆ ಪಿ ಎಚ್ಡಿ ಮಾಡುವುದಕ್ಕೆ ಪ್ರೋತ್ಸಾಹ ನೀಡಿದರು. ಇವರಿಗೆ ಇಬ್ಬರು ಮಕ್ಕಳು ಅಭಿಜಿತ್ ಮತ್ತು ಅರ್ಜುನ್ .ನನ್ನ ಭಾವನವರಾದ ಶ್ರೀ ಎನ್ .ಸಿ .ರಘುರಾಮ್ ಅವರು ಮತ್ತಷ್ಟು ಸಮಾಜ ಸೇವೆ ಹಾಗೂ ಸಾಧನೆ ಮಾಡಲಿ ಎಂದು ಹಾರೈಸುತ್ತಾ ಅವರಿಗೆ ಜನ್ಮ ದಿನದ ಶುಭಾಶಯಗಳ ಗಳನ್ನು ಕೋರುತ್ತೇನೆ.
ಕೃತಜ್ಞತೆ: ಲೇಖಕರಾದ Vidyaranya Venkataramanan
Happy birthday Raghuram Nittoor Sir 🌷🙏🌷🌷
ಕಾಮೆಂಟ್ಗಳು